Advertisement

ಹಾಳಾದ ಟ್ರಾಫಿಕ್ ಸಿಗ್ನಲ್‌: ಸವಾರರ ಪರದಾಟ

04:56 PM May 31, 2022 | Team Udayavani |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷದ ಸಂಭ್ರಮದಲ್ಲಿದ್ದರೂ ಇನ್ನೂಪರಿಪೂರ್ಣವಾಗಿ ಜಿಲ್ಲಾ ಕೇಂದ್ರವಾಗಿ ಅಭಿವೃದ್ಧಿಹೊಂದಿಲ್ಲ ಎಂಬುವುದಕ್ಕೆ ಅನೇಕ ಸಾಕ್ಷಿಗಳು ಜೀವಂತವಾಗಿವೆ ಅದರಲ್ಲೂ ಪ್ರಮುಖವಾಗಿ ಸಂಚಾರ ದಟ್ಟಣೆಯನ್ನು ತಡೆಗಟ್ಟುವ ಸಲುವಾಗಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್‌ ದೀಪಗಳ ಅವ್ಯವಸ್ಥೆಯಿಂದ ವಾಹನ ಸವಾರರು ಅಂಗೈಯಲ್ಲಿ ಜೀವ ಇಟ್ಟುಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಹೌದು, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ಆರೋಗ್ಯಸಚಿವ ಡಾ.ಕೆ ಸುಧಾಕರ್‌ ಅವರು ಪ್ರಯತ್ನಮಾಡುತ್ತಿದ್ದರೂ ಜಿಲ್ಲಾ ಕೇಂದ್ರವಾದಚಿಕ್ಕಬಳ್ಳಾಪುರದಲ್ಲಿ ಇನ್ನೂ ಹಲವು ಅಭಿವೃದ್ಧಿಕಾರ್ಯಗಳು ನಡೆಯಬೇಕಿದೆ ಅದರಲ್ಲಿ ವಿಶೇಷವಾಗಿ ಸಂಚಾರದ ವ್ಯವಸ್ಥೆಯನ್ನು ಸರಿಪಡಿಸಲು ನಗರದ ಹಲವಡೆ ಟ್ರಾಫಿಕ್ ಸಿಗ್ನಲ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ನಿರ್ವಹಣೆ ಕೊರತೆಯಿಂದ ಅವು ಇದ್ದೂ ಇಲ್ಲದಂತಾಗಿವೆ.

ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಮಾರ್ಗದಲ್ಲಿ ಪೊಲೀಸ್‌ ವೃತ್ತದ ಬಳಿ ಸುಮಾರುದಿನಗಳಿಂದ ಟ್ರಾಫಿಕ್ ಸಿಗ್ನಲ್‌ ಲೈಟ್‌ಗಳು ಕೆಟ್ಟುನಿಂತಿವೆ. ಇನ್ನೂ ಒಂದು ಅರ್ಧ ಕಿ.ಮೀ. ಕ್ರಮಿಸಿದನಂತರ ಶ್ರೀ ಸಿದ್ದೇಶ್ವರ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್‌ ಲೈಟ್‌ಗಳು ಕಣ್ಣುಮುಚ್ಚಿ ಕೊಂಡಿದ್ದು,ಅಪಘಾತಗಳಿಗೆ ಎಡೆಮಾಡಿಕೊಟ್ಟಂತಿದೆ.

ಮತ್ತೂಂದೆಡೆ ಚಿಕ್ಕಬಳ್ಳಾಪುರ ಬೆಂಗಳೂರು ಮಾರ್ಗದ ಬಲಮುರಿ ವೃತ್ತದಲ್ಲೂ ಟ್ರಾಫಿಕ್ ಸಿಗ್ನಲ್‌ದೀಪಗಳು ಹಾಳಾಗಿದ್ದು, ವಾಹನಗಳ ಅಡ್ಡಾದಿಡ್ಡಿ ಸಂಚಾರ ಆತಂಕಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಗಾಳಿ, ಗುಡುಗು ಮಳೆಯಿಂದಟ್ರಾಫಿಕ್ ಸಿಗ್ನಲ್‌ ದೀಪಗಳು ಕೆಟ್ಟು ಹೋಗಿವೆ. ಅದನ್ನು ದುರಸ್ತಿಗೊಳಿಸಲುಈಗಾಗಲೇ ಸೂಚನೆ ನೀಡಲಾಗಿದೆ ಮುಂದಿನ ವಾರದೊಳಗೆ ಚಿಕ್ಕಬಳ್ಳಾಪುರ ನಗರದಲ್ಲಿರುವ ಎಲ್ಲಾ ಟ್ರಾಫಿಕ್ ಸಿಗ್ನಲ್‌ ದೀಪಗಳು ಕಾರ್ಯಾರಂಭ ಆಗಲಿದೆ. – ವೇಣುಗೋಪಾಲ್‌, ಪಿಎಸ್‌ಐ, ಸಂಚಾರ ವಿಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next