Advertisement

ಕಾಪು ತಾಲೂಕಿನಲ್ಲಿ ಗಾಳಿ-ಮಳೆಗೆ ಭಾರೀ ನಷ್ಟ

07:02 PM Aug 08, 2019 | Team Udayavani |

ಕಾಪು: ಸೋಮವಾರದಿಂದ ಸುರಿಯುತ್ತಿರುವ ಭಾರೀ ಗಾಳಿ – ಮಳೆಯ ಕಾರಣದಿಂದಾಗಿ ಕಾಪು ತಾಲೂಕಿನ ವಿವಿಧೆಡೆ ಈವರೆಗೆ ಸುಮಾರು 28.67 ಲಕ್ಷ ರೂ. ಮೊತ್ತದ ಸೊತ್ತು ಹಾನಿ ಸಂಭವಿಸಿದೆ.

Advertisement

ಕಂದಾಯ ಇಲಾಖೆಗೆ ಸಂಬಂಧಪಟ್ಟು 19.17 ಲಕ್ಷ ರೂ. ಸೊತ್ತು ಹಾನಿಯಾಗಿದ್ದು, ಮೆಸ್ಕಾಂ ಇಲಾಖೆಗೆ 9.50 ಲಕ್ಷ ರೂ. ವರೆಗೆ ನಷ್ಟ ಉಂಟಾಗಿದೆ.

ಮಂಗಳವಾರ ಸಂಜೆಯವರೆಗೆ 28 ಪ್ರಕರಣಗಳಿಂದ 8.76 ಲಕ್ಷ ರೂ., ಬುಧವಾರ ಸಂಜೆಯವರೆಗೆ 34 ಪ್ರಕರಣಗಳಿಂದ 7.26 ಲಕ್ಷ ರೂ. ಮತ್ತು ಗುರುವಾರ ಸಂಜೆಯವರೆಗೆ 3.15 ಲಕ್ಷ ರೂ. ವರೆಗೆ ನಷ್ಟ ಸಂಭವಿಸಿರುವ ಬಗ್ಗೆ ಕಂದಾಯ ಇಲಾಖೆಗೆ ದೂರು ಬಂದಿದೆ.

ಮೆಸ್ಕಾಂಗೆ ಭಾರೀ ಹಾನಿ
ಗುರುವಾರ ಸಂಜೆಯವರೆಗೆ ಲಭಿಸಿದ ಮಾಹಿತಿಯಂತೆ ಮೆಸ್ಕಾಂ ಕಾಪು ಉಪ ವಿಭಾಗ ವ್ಯಾಪ್ತಿಯಲ್ಲಿ ಸುಮಾರು 70 ರಿಂದ 80 ಕಂಬಗಳು ಉರುಳಿ ಬಿದ್ದಿದ್ದು ಸುಮಾರು 8 ಲಕ್ಷ ರೂ. ವರೆಗೆ ನಷ್ಟ ಉಂಟಾಗಿದೆ. ಗುರುವಾರ ಬೆಳಗ್ಗೆ ಪಾಜಕ ಬಳಿ ಟವರ್‌ ತುಂಡಾಗಿ ಬಿದ್ದ ಪರಿಣಾಮ 1.50 ಲಕ್ಷ ರೂ. ವರೆಗೆ ನಷ್ಟ ಉಂಟಾಗಿದೆ. ಸೋಮವಾರ ರಾತ್ರಿಯಿಂದೀಚೆಗೆ ವಿದ್ಯುತ್‌ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗುತ್ತಿದ್ದು, ಎಲ್ಲೆಡೆಯ ಸಮಸ್ಯೆ ಪರಿಹಾರಕ್ಕೆ ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬಂದಿ 24*7 ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಳೆ ಹಾನಿ ಸಂಬಂಧಿತ‌ ಪ್ರದೇಶಗಳಿಗೆ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರು ಗುರುವಾರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ತಾತ್ಕಾಲಿಕ ಪರಿಹಾರ ಧನವನ್ನು ಒದಗಿಸಿಕೊಡಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.


Advertisement
Advertisement

Udayavani is now on Telegram. Click here to join our channel and stay updated with the latest news.

Next