Advertisement

ಮಿನಿ ವಿಧಾನಸೌಧ ಸಂಪರ್ಕ ರಸ್ತೆ: ಕಿತ್ತುಹೋದ ಕಾಂಕ್ರೀಟ್‌

11:05 AM Jul 29, 2018 | Team Udayavani |

ಬಂಟ್ವಾಳ : ಬಿ.ಸಿ. ರೋಡ್‌ ಸರ್ವಿಸ್‌ ರಸ್ತೆಯ ಪ್ರಮುಖ ಜಾಗದಲ್ಲಿ ಕಾಂಕ್ರೀಟ್‌ ಕಿತ್ತು ಹೋಗಿ 2 ತಿಂಗಳಾಗಿವೆ. ಸಂಸದ ನಳಿನ್‌ ಕುಮಾರ್‌ ಕಟೀಲು ಸಭೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಬಿ.ಸಿ.ರೋಡ್‌ನ‌ ಹೆದ್ದಾರಿಯ ಚಿತ್ರಣವೇ ಬದಲಾಯಿಸಬೇಕು ಎಂದು ತಿಳಿಸಿದ್ದರು. ಆದರೆ ಅಧಿಕಾರಿಗಳು ಕಿತ್ತುಹೋದ ಕಾಂಕ್ರೀಟ್‌ ಸರಿಪಡಿಸಲು ಇನ್ನೂ ಕ್ರಮ ಕೈಗೊಂಡಿಲ್ಲ. ಬಿ.ಸಿ. ರೋಡ್‌ ಸರ್ವಿಸ್‌ ರಸ್ತೆಯ ಆದಿಯಿಂದ ಅಂತ್ಯದವರೆಗೂ ಸಮಸ್ಯೆಗಳ ಆಗರವೇ ಇದೆ.

Advertisement

ಅಲ್ಲೇ ಪಾರ್ಕಿಂಗ್‌
ಸರ್ವಿಸ್‌ ರಸ್ತೆಯ ಎರಡೂ ಬದಿ ನಡೆದಾಡಲೂ ಸಾಧ್ಯವಿಲ್ಲ. ವಾಹನಗಳನ್ನು ಫ್ಲೈ ಓವರ್‌ ಬಳಿ ತೆಗೆದುಕೊಂಡು ಹೋಗಲೂ ಕಷ್ಟವಾಗುತ್ತದೆ. ನಾಲ್ಕು ಮಾರ್ಗ ಸೇರುವ ಜಾಗದ ಪಕ್ಕದಲ್ಲೇ ಬಸ್‌ ನಿಲ್ದಾಣ ರೀತಿಯ ನಿರ್ಮಾಣ ರಸ್ತೆ ಬದಿ ಇದ್ದು, ಅಲ್ಲಿ ಬಸ್ಸೇನಾದರೂ ನಿಂತರೆ ವಾಹನಗಳು ಸಾಲುಗಟ್ಟಬೇಕು.

Advertisement

Udayavani is now on Telegram. Click here to join our channel and stay updated with the latest news.

Next