Advertisement

ದಲಿತ ಬಾಲಕಿಯ ತಲೆಕಡಿದು ಕೊಂದ ನೆರೆಮನೆಯ ಕಾಮುಕ ಆರೆಸ್ಟ್‌

05:52 PM Oct 31, 2018 | Team Udayavani |

ಸೇಲಂ :  ತನ್ನ ಲೈಂಗಿಕಾಸಕ್ತಿಯನ್ನು ತಿರಸ್ಕರಿಸಿದ 13ರ ಹರೆಯದ ದಲಿತ ಬಾಲಕಿಯನ್ನು ಆಕೆಯ ನೆರೆಮನೆಯಾತನೇ ತಲೆ ಕಡಿದು ಕೊಂದಿರುವ ಅಮಾನುಷ ಘಟನೆ ತಮಿಳು ನಾಡಿನ ಸೇಲಂ ಜಿಲ್ಲೆಯಿಂದ ವರದಿಯಾಗಿದೆ. 

Advertisement

ಬಾಲಕಿಯನ್ನು ತಲೆ ಕಡಿದು ಕೊಂದ ಆರೋಪಿ ದಿನೇಶ್‌ ಕುಮಾರ್‌ ಎಂಬಾತನನ್ನು ಪೊಲೀಸರು ಬಂಧಿಸಿ ಸೇಲಂ ಜೈಲಿಗೆ ಹಾಕಿದ್ದಾರೆ; ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸೇಲಂ ಜಿಲ್ಲೆಯ ಅತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸವರ್ಣೀಯ ಆರೋಪಿಯ ಲೈಂಗಿಕ ದುರ್ವರ್ತನೆಯ ಬಗ್ಗೆ ಬಾಲಕಿಯ ಮನೆಯವರು ಆನೇಕ ಬಾರಿ ದೂರಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. 

ಹತ್ಯೆಗೀಡಾಗಿರುವ ಬಾಲಕಿಯು ಸಮೀಪದ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಳು ಮತ್ತು ತನ್ನ ಹೆತ್ತವರ ಮೂವರು ಹೆಣ್ಣು ಮಕ್ಕಳಲ್ಲಿ ಕೊನೆಯವಳಾಗಿದ್ದಳು. ಆರೋಪಿಯು ತನಗೆ ಕಿರುಕುಳ ನೀಡುತ್ತಿದ್ದುದನ್ನು ಬಾಲಕಿಯು  ಹಲವು ಬಾರಿ ತನ್ನ ತಾಯಿಯಲ್ಲಿ ಹೇಳಿದ್ದಳು. 

Advertisement

Udayavani is now on Telegram. Click here to join our channel and stay updated with the latest news.

Next