Advertisement

ದ.ಕ.: 12 ಸಾವು, 322 ಮಂದಿಗೆ ಪಾಸಿಟಿವ್‌

01:38 AM Oct 03, 2020 | mahesh |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶುಕ್ರವಾರ 322 ಮಂದಿಗೆ ಕೊರೊನಾ ದೃಢ ಪಟ್ಟಿದೆ. 12 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾಕ್ಕೆ ಸಂಬಂಧಿಸಿ ವಿವಿಧ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 277 ಮಂದಿ ಗುಣ ಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 5,839 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಶಾಸಕರು ಸ್ವಯಂ ಕ್ವಾರಂಟೈನ್‌
ಶಾಸಕ ಡಿ. ವೇದವ್ಯಾಸ ಕಾಮತ್‌ ಅವರ ಆಪ್ತ ಕಾರ್ಯದರ್ಶಿಗೆ ಕೋವಿಡ್‌ ದೃಢಪಟ್ಟಿರುವುದರಿಂದ ಶಾಸಕರು ಸ್ವಯಂ ಕ್ವಾರಂಟೈನ್‌ಗೊಳಪಟ್ಟಿದ್ದಾರೆ.

ಬಸ್‌ ಸಿಬಂದಿಗೆ ಪರೀಕ್ಷೆ
ಬಸ್‌ಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು, ನಿರ್ವಾಹಕರಿಗೆ ಶುಕ್ರವಾರ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಮೂವರಿಗೆ ಕೊರೊನಾ ದೃಢಪಟ್ಟಿದೆ. ಒಟ್ಟು 99 ಚಾಲಕರು, ನಿರ್ವಾಹಕರು ಹಾಗೂ ಸಿಬಂದಿಗೆ ಪರೀಕ್ಷೆ ಮಾಡಲಾಗಿತ್ತು.

ಗ್ರಾ.ಪಂ.: 105 ಮಂದಿಗೆ ದೃಢ
ಮಂಗಳೂರು: ದ.ಕ. ಜಿ. ಪಂ. ಪ್ರತಿ ಗ್ರಾ. ಪಂ. ಮಟ್ಟದಲ್ಲಿ ಹಮ್ಮಿಕೊಂಡ ಪರೀಕ್ಷೆಯಲ್ಲಿ ಶುಕ್ರವಾರ 105 ಮಂದಿಗೆ ಕೊರೊನಾ ದೃಢಪಟ್ಟಿದೆ. ವಿವಿಧ ಗ್ರಾ. ಪಂಗಳ ವ್ಯಾಪ್ತಿ, ವೆನ್ಲಾಕ್‌ ಆಸ್ಪತ್ರೆ ಮತ್ತು ಖಾಸಗಿ ಲ್ಯಾಬ್‌ಗಳಲ್ಲಿ ಒಟ್ಟು 2,792 ಮಂದಿ ಪರೀಕ್ಷೆ ಮಾಡಿಸಿ ಕೊಂಡಿದ್ದರು. ಮಂಗಳೂರು ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ 596 ಮಂದಿಗೆ ರ್ಯಾಟ್‌ (44 ದೃಢ), 327 ಮಂದಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗಿದೆ. ಸುಳ್ಯದಲ್ಲಿ 49 ಮಂದಿ ರ್ಯಾಟ್‌ (4 ದೃಢ), 140 ಆರ್‌ಟಿಪಿಸಿಆರ್‌, ಬೆಳ್ತಂಗಡಿಯಲ್ಲಿ 141 ರ್ಯಾಟ್‌ (15 ದೃಢ), 56 ಆರ್‌ಟಿಪಿಸಿಆರ್‌, ಪುತ್ತೂರಿನಲ್ಲಿ 286 ರ್ಯಾಟ್‌ (28 ದೃಢ), 52 ಆರ್‌ಟಿಪಿಸಿಆರ್‌, ಬಂಟ್ವಾಳದಲ್ಲಿ 330 ರ್ಯಾಟ್‌ (9 ದೃಢ), 291 ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ. ಇದಲ್ಲದೆ ವೆನ್ಲಾಕ್‌ ಆಸ್ಪತ್ರೆಯಲ್ಲಿ 43 ರ್ಯಾಟ್‌ (5 ದೃಢ), 33 ಆರ್‌ಟಿಪಿಸಿಆರ್‌, ಎಲ್‌ಜಿಎಚ್‌ಗಳಲ್ಲಿ 17 ರ್ಯಾಟ್‌ (0 ದೃಢ) ಪರೀಕ್ಷೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next