Advertisement
ಸ್ಥಾಯೀ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಮಾತನಾಡಿ, ಜಿಲ್ಲೆ ಹಾಗೂ ಜಿಲ್ಲೆಯ ಕೆಲವು ಗ್ರಾ.ಪಂ.ಗಳಿಗೆ ಸ್ವತ್ಛತೆಗಾಗಿ ಪುರಸ್ಕಾರಗಳು ಬಂದಿವೆ. ಆದರೆ ವಸ್ತುಸ್ಥಿತಿ ಬೇರೆ. ಜಿಲ್ಲೆಯಲ್ಲಿ ಶೌಚಾಲಯ ಇಲ್ಲದ ಮನೆಗಳ ಪೈಕಿ ಶೇ. 80ರಷ್ಟು ಪ.ಜಾತಿ ಮತ್ತು ಪ.ಪಂಗಡದ ಕುಟುಂಬಗಳು. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದರು.
ಗ್ರಾಮೀಣ ನ್ಯಾಯಬೆಲೆ ಅಂಗಡಿಗಳಲ್ಲಿ 3ಜಿ ನೆಟ್ವರ್ಕ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸಿಇಒ ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಸೂಚಿಸಿದರು. ಕೆಆರ್ಡಿಎಲ್ ವಿರುದ್ಧ ವರದಿ ಕೆಆರ್ಐಡಿಎಲ್ ಅಧಿಕಾರಿ ಮಾತ ನಾಡಿ, ಜಿಲ್ಲೆಯಲ್ಲಿ 102 ಶುದ್ಧ ಕುಡಿ ಯುವ ನೀರಿನ ಘಟಕ ಯೋಜನೆ ಇದ್ದು, 80ನ್ನು ಪ್ರಾರಂಭಿಸಲಾಗಿದೆ. ಮುಂದಿನ 15 ದಿನಗಳೊಳಗೆ ಉಳಿದ ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಸಮಗ್ರ ಮಾಹಿತಿಯನ್ನು ಕೆಆರ್ಐಡಿಎಲ್ ನೀಡುತ್ತಿಲ್ಲ. ಸಭೆ ಗಳಿಗೂ ಸರಿಯಾಗಿ ಹಾಜರಾಗುತ್ತಿಲ್ಲ. ಘಟಕಗಳನ್ನು ಅಸಮರ್ಪಕವಾಗಿ ಪ್ರಾರಂಭಿಸಲಾಗಿದೆ ಎಂದು ದೂರಿ ದರು. ಈ ಬಗ್ಗೆ ಸರಕಾರಕ್ಕೆ ವರದಿ ಕಳುಹಿಸಲು ನಿರ್ಣಯಿಸಲಾಯಿತು.
Related Articles
Advertisement
ಗ್ರಾಮ ಪಂಚಾಯತ್ಗಳಿಗೆ ಪುರಸ್ಕಾರವಿಶ್ವ ಶೌಚಗೃಹ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮಗಳನ್ನು ಅತ್ಯುತ್ತಮ ರೀತಿಯಲ್ಲಿ ಜಾರಿಗೊಳಿಸಿದ ಮಂಗಳೂರು ತಾ.ಪಂ.ನ ಕಲ್ಲಮುಂಡ್ಕೂರು, ಬಂಟ್ವಾಳದ ತುಂಬೆ, ಪುತ್ತೂರಿನ ನೂಜಿಬಾಳ್ತಿಲ, ಬೆಳ್ತಂಗಡಿಯ ಮುಂಡಾಜೆ ಹಾಗೂ ಸುಳ್ಯದ ಕನಕಮಜಲು ಗ್ರಾ.ಪಂ.ಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿ.ಪಂ. ಸಾಮಾನ್ಯ ಸಭೆ: ಪ್ರಶಸ್ತಿಗೆ ಆಕ್ಷೇಪ
ಪ್ರಶಸ್ತಿಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಶಸ್ತಿಯನ್ನು ಯಾವ ಮಾನದಂಡದಲ್ಲಿ ನೀಡಲಾಗಿದೆ ಎಂದು ಪ್ರಶ್ನಿಸಿ, ಕೆಲವು ಗ್ರಾ.ಪಂ.ಗಳ ಆವರಣದಲ್ಲಿ ಸ್ವತ್ಛತೆಯೇ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಸೆಲ್ವಮಣಿ ಆರ್., ಈ ಪ್ರಶಸ್ತಿಗಾಗಿ ಕೇಂದ್ರ ಸರಕಾರ ಕೆಲವು ನಿಯಮಾವಳಿಗಳನ್ನು ನೀಡಿದೆ. ಅವುಗಳ ಅನುಸಾರ ಚಟುವಟಿಕೆ ಹಮ್ಮಿಕೊಂಡ ಗ್ರಾ. ಪಂ.ಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.