Advertisement

ಕೊಪ್ಪಳ: ಕೋವಿಡ್ ನಿವಾರಣೆಗಾಗಿ ಪ್ರತಿದಿನ ಮೃತ್ಯುಂಜಯ ಹೋಮ

01:33 PM Jun 01, 2021 | Team Udayavani |

ಕೊಪ್ಪಳ: ಜಗತ್ತಿನಲ್ಲಿ ಕೋವಿಡ್ ಮಹಾಮಾರಿಯು ಜನರ ಜೀವ ಹಿಂಡುತ್ತಿದೆ. ಎಲ್ಲೆಡೆಯೂ ಸಾವು ನೋವು ಕಾಣುತ್ತಿದ್ದೇವೆ. ಈ ಮಧ್ಯೆ ಕೋವಿಡ್ ದೂರವಾಗಲು ಎಲ್ಲರೂ ನೆಮ್ಮದಿಂದ ಜೀವನ ಸಾಗಿಸಬೇಕು ಎಂಬ ಉದ್ದೇಶದಿಂದ ಕೊಪ್ಪಳದ ವಿನಾಯಕ ಭಟ್ ಸಿದ್ದಾಂತಿ ಅವರು ಪ್ರತಿದಿನ ಮೃತ್ಯುಂಜಯ ಹೋಮ ನಡೆಸುತ್ತಿದ್ದಾರೆ.

Advertisement

ಲೋಕ ಕಲ್ಯಾಣಕ್ಕಾಗಿ ವಿನಾಯಕ ಭಟ್ ಸಿದ್ದಾಂತಿ ಮತ್ತು ಮಲ್ಲಾರ ಭಟ್ಟ ಸಿದ್ದಾಂತಿ ಅವರು ತಮ್ಮ ಭಾಗ್ಯನಗರದ ಮನೆಯಲ್ಲಿ ಮೇ 27 ರಿಂದ ಪ್ರತಿ ದಿನ ಬೆಳಗ್ಗೆ ಒಂದು ಗಂಟೆಗಳ ಮೃತ್ಯುಂಜಯ ಹೋಮ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಸುಧಾಕರಣ್ಣಾ.. ನೀನು ಮೊದಲು ಔಷಧಿ ಕೊಡಿಸುವ ಕೆಲಸ ಮಾಡು: ಡಿ ಕೆ ಶಿವಕುಮಾರ್

ಮಂಗಳವಾರ ಮೃತ್ಯುಂಜಯ ಹೋಮವು 6ನೇ ದಿನಕ್ಕೆ ಕಾಲಿರಿಸಿದೆ. ಹೋಮವು ಪ್ರತಿ ದಿನವೂ ನಡೆಯುತ್ತಿದೆ. ನಮ್ಮ ಸಂಕಲ್ಪ ಇನ್ನೂ ಪೂರ್ಣವಾಗಿಲ್ಲ, ನಿತ್ಯವು ಮಂತ್ರ ಪಠಣದ ಮೂಲಕ ಹೋಮವು ನಡೆಸಲಾಗುತ್ತಿದೆ ಎಂದು ವಿನಾಯಕ ಭಟ್ ಸಿದ್ದಾಂತಿ ಅವರು ಉದಯವಾಣಿ ಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next