Advertisement

ಮಕರ ಸಂಕ್ರಾಂತಿಯ ಶುಭದಿನದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:48 AM Jan 14, 2022 | Team Udayavani |

ಮೇಷ:

Advertisement

ಗುರುಹಿರಿಯರ ಆಶೀರ್ವಾದ ಸಹಕಾರ. ನಿರೀಕ್ಷಿತ ಸ್ಥಾನಮಾನ ಗೌರವ ಪ್ರಾಪ್ತಿ. ದೀರ್ಘ‌ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳಿಂದ ಪ್ರೋತ್ಸಾಹ.

ವೃಷಭ:

ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಜನಮನ್ನಣೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಧನಲಾಭ. ಗುರುಹಿರಿಯರಿಂದ ಸಂತೋಷ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.

ಮಿಥುನ:

Advertisement

ದೀರ್ಘ‌ ಪ್ರಯಾಣ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ಕೆಲಸ ಕಾರ್ಯ ಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ. ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು. ಮಿತ್ರರಿಂದ ಸಾಮಾನ್ಯ ಪ್ರೋತ್ಸಾಹ.

ಕಟಕ:

ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಒತ್ತಡ ಎದುರಾದೀತು. ಆಸ್ತಿ ವಿಚಾರದಲ್ಲಿ ಅಡೆತಡೆಗಳು ಕಂಡುಬಂದಾವು. ಗುರುಹಿರಿಯರ ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು.

ಸಿಂಹ:

ದೂರ ಸಂಚಾರ ಸಂಭವ. ಪರಿಸ್ಥಿತಿಗೆ ಸರಿಯಾದ ಕಾರ್ಯ ವೈಖರಿ. ಕೆಲವೊಮ್ಮೆ ಕುಚೇಷ್ಠೆ ನಡೆದೀತು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗುರುಹಿರಿಯರ ಆರೋಗ್ಯ ಗಮನಹರಿಸಿ. ದಾಂಪತ್ಯ ತೃಪ್ತಿಕರ.

ಕನ್ಯಾ:

ದೂರ ಸಂಚಾರ ಸಂಭವ. ಪರಿಸ್ಥಿತಿಗೆ ಸರಿಯಾದ ಕಾರ್ಯ ವೈಖರಿ. ಕೆಲವೊಮ್ಮೆ ಕುಚೇಷ್ಠೆ ನಡೆದೀತು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗುರುಹಿರಿಯರ ಆರೋಗ್ಯ ಗಮನಹರಿಸಿ. ದಾಂಪತ್ಯ ತೃಪ್ತಿಕರ.

ತುಲಾ:

ದೀರ್ಘ‌ ಪ್ರಯಾಣ. ಅಧ್ಯಯನದಲ್ಲಿ ತತ್ಪರತೆ. ಧಾರ್ಮಿಕ ವಿಚಾರಗಳಲ್ಲಿ ಪಾಲ್ಗೊಳ್ಳು ವಿಕೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖದಲ್ಲಿ ಸಂತೋಷ ವೃದ್ಧಿ. ಪರಸ್ಪರ ಸಹಕಾರ. ಆರೋಗ್ಯ ಗಮನಿಸಿ.

ವೃಶ್ಚಿಕ:

ಉದಾರತೆ, ಧೈರ್ಯ ಪರಾಕ್ರಮ ದಿಂದ ಕೂಡಿದ ದಿನಚರಿ. ಸ್ಪರ್ಧೆಗಳಲ್ಲಿ ಜಯ. ಬಂಧುಮಿತ್ರರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಹಣಕಾಸಿನ ವಿಚಾರದಲ್ಲಿ ಏರಿಳಿತ ಸಂಭವ.

ಧನು:

ಆರೋಗ್ಯ ವೃದ್ಧಿ. ಬಂಧುಮಿತ್ರರ ಭೇಟಿ. ಗುರುಹಿರಿಯರ ಆಶೀರ್ವಾದ. ದೂರ ಪ್ರಯಾಣಕ್ಕೆ ದೇವತಾ ಸ್ಥಳ ಸಂದರ್ಶನಕ್ಕೆ ಅವಕಾಶ ಒದಗಿ ಬಂದೀತು. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯದಲ್ಲಿ ಅನುರಾಗ ವೃದ್ಧಿ.

ಮಕರ:

ದಂಪತಿಗಳಲ್ಲಿ ಪ್ರೀತಿ, ಅನುರಾಗ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಉತ್ತಮ ಬೆಳವಣಿಗೆ. ಮಕ್ಕಳೊಂದಿಗೆ ಸಂತೋಷದ ಸಮಯ. ಗುರುಹಿರಿಯರಲ್ಲಿ ಚರ್ಚೆ ಸಂಭವ.

ಕುಂಭ:

ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿಸಿದಂತೆ ಸ್ಥಾನ ಗೌರವಾದಿ ಲಭಿಸಿದ ಖುಷಿ. ಸ್ಪರ್ಧೆಗಳಲ್ಲಿ ಜಯ. ವಿದ್ಯಾರ್ಥಿಗಳಿಗೆ ಅನುಕೂಲದ ಸನ್ನಿವೇಶ. ಸಾಂಸಾರಿಕ ಸುಖದಲ್ಲಿ ಪರಸ್ಪರರ ಸಹಕಾರ, ಪ್ರೋತ್ಸಾಹ.

ಮೀನ:

ಉತ್ತಮ ಆರೋಗ್ಯ. ಸ್ವಪ್ರಯತ್ನದಿಂದ ಕೂಡಿದ ಕಾರ್ಯ ವೈಖರಿ. ಭೂಮಾದಿ ವಿಚಾರಗಳಲ್ಲಿ ಪ್ರಗತಿ. ಸಾಂಸಾರಿಕ ಸುಖ ತೃಪ್ತಿದಾಯಕ. ಆರ್ಥಿಕ ಅಭಿವೃದ್ಧಿ. ಮಿತ್ರರಿಂದ ಸಹಕಾರ. ದೂರ ಪ್ರಯಾಣದಲ್ಲಿ ವಿಳಂಬ. ಅನ್ಯರ ಸಹಾಯ ನಿರೀಕ್ಷಿಸದಿರಿ.

Advertisement

Udayavani is now on Telegram. Click here to join our channel and stay updated with the latest news.

Next