Advertisement

ಉದ್ಯೋಗಿ ಮಹಿಳೆಯರಿಗೆ ಮುಂಭಡ್ತಿ ಯೋಗ, ಮನಸ್ತಾಪದಿಂದ ಸಮಸ್ಯೆ: ಹೇಗಿದೆ ಇಂದಿನ ದಿನಭವಿಷ್ಯ

07:30 AM Jan 06, 2021 | Team Udayavani |

ಮೇಷ: ನಿಮ್ಮೆಣಿಕೆಯಂತೆ ಎಲ್ಲಾ ಕೆಲಸಗಳು ನಡೆದು, ದಾರಿ ಸುಗಮವಾಗಲಿದೆ. ನಿಮ್ಮಿಂದ ದೇವತಾ ಕಾರ್ಯಗಳು ನಡೆಯಲಿವೆ. ಮನೆಯಲ್ಲಿ ಪತ್ನಿ, ಮಕ್ಕಳ ಹಾಗೂ ಇತರ ಸದಸ್ಯರ ಬೆಂಬಲವು ನಿಮಗೆ ದೊರಕಲಿದೆ.

Advertisement

ವೃಷಭ: ಮನೆಯಲ್ಲಿ ಸ್ವಲ್ಪ ಬೇಸರದ ವಿಷಯಗಳು ನಡೆದು ಮನಶಾಂತಿಗೆ ಭಂಗ ಬಂದೀತು. ಮಕ್ಕಳ ಅಭಿವೃದ್ಧಿ ಕುರಿತು ತುಂಬಾ ಚಿಂತೆ ಕಂಡು ಬಂದೀತು. ನೀವು ಚಿಂತೆ ಮಾಡಿದ್ದೇ ಬಂತು. ಅದರ ಪಾಡಿಗೆ ಅದಿರುತ್ತದೆ.

ಮಿಥುನ: ಜೀವನದಲ್ಲಿ ಏನಾದರೂ ಸಾಧಿಸಿಯೇ ತೀರಬೇಕು ಎಂಬ ಉತ್ಕಟ ಅಭಿಲಾಷೆ ನೆರವೇರಲಿದೆ. ನಿಮ್ಮ ದೇಹಬಲಕ್ಕಿಂತಲೂ ಬುದ್ಧಿ ಬಲ ಅಲ್ಲದೆ, ವಾಕ್ಚಾತುರ್ಯ ನಿಮ್ಮನ್ನು ಮನ್ನಡೆಸಲಿದೆ. ಆರೋಗ್ಯ ಅಭಿವೃದ್ಧಿ.

ಕರ್ಕ: ನೀವು ಯಾವ ಕಾರ್ಯವನ್ನು ಕೈಗೊಳ್ಳುವು ದಾದರೂ ಚೆನ್ನಾಗಿ ಯೋಚಿಸಿ, ನಿಧಾನವಾಗಿ ಕಾರ್ಯಗತರಾಗಬೇಕೆಂಬುದನ್ನು ರೂಢಿಸಿಕೊಳ್ಳಿರಿ. ಆಧ್ಯಾತ್ಮಿಕ ಚಿಂತನೆಯತ್ತ ಮನಸ್ಸು ಹರಿಯುವುದು. ನೆಂಟರಿಷ್ಟರ ಆಗಮನದಿಂದ ಸಂತಸ.

ಸಿಂಹ: ಉದ್ಯೋಗಿ ಮಹಿಳೆಯರಿಗೆ ಮುಂಭಡ್ತಿ ಯೋಗವು ಕಂಡುಬರಲಿದೆ. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಮನಸ್ಸು ಮಾಡುವಿರಿ. ಮನಸ್ತಾಪದಿಂದ ಸಮಸ್ಯೆ, ಅವಮಾನವು ತೋರಿಬಂದೀತು. ಅತೀ ಆತುರತೆ ಸಲ್ಲದು.

Advertisement

ಕನ್ಯಾ: ಕಷ್ಟವನ್ನು ಧೈರ್ಯದಿಂದ ಎದುರಿಸುವ ಗುಣ ನಿಮ್ಮದಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹಳೇ ಶತ್ರುವಿನ ಕಾಟ ಕಾಣಿಸಲಿದೆ. ಹಲವು ಬಗೆಯ ಖರ್ಚುವೆಚ್ಚಗಳು ಕೂಡಿಬಂದೀತು. ಪ್ರಗತಿಪಥದತ್ತ ನೀವು ಸಾಗುವಿರಿ.

ತುಲಾ: ಮಕ್ಕಳ ವಿದ್ಯಾಭ್ಯಾಸದಲ್ಲಿ ಏಳಿಗೆ ಕಂಡುಬಂದು ಸಂತಸವಾಗಲಿದೆ. ಪತಿಯೊಂದಿಗೆ ಅನಾವಶ್ಯಕವಾಗಿ ಮನಸ್ತಾಪ ಮಾಡದಿರಿ. ಬಂಧುಮಿತ್ರರ ಒಡನಾಟ ಹಾಗೂ ಮಂಗಲ ಕಾರ್ಯದಲ್ಲಿ ಪಾಲ್ಗೊಳ್ಳುವ ಸುಯೋಗ.

ವೃಶ್ಚಿಕ: ಮಾನಸಿಕವಾಗಿ ಚಂಚಲತೆ ಕಾಡಿದರೂ ನಿಮ್ಮ ದೃಢ ನಿರ್ಧಾರ ನಿಮ್ಮನ್ನು ಮುನ್ನಡೆಸಲಿದೆ. ಕಲಾವಿದರಿಗೆ ಅವಕಾಶಗಳು ಹುಡುಕಿಕೊಂಡು ಬರಲಿದೆ. ಆರೋಗ್ಯದಲ್ಲಿ ಏರುಪೇರಾಗದಂತೆ ಕಾಳಜಿ ವಹಿಸಿರಿ. ಶುಭವಿದೆ.

ಧನು: ಯಾರೋ ಮಾಡಿದ ತಪ್ಪಿಗೆ ಹೊಣೆಯಾಗುವ ಸಾಧ್ಯತೆ ಕಂಡುಬರಲಿದೆ. ಸ್ಥಿರ ಉದ್ಯೋಗಿಗಳಿಗೆ ಪರಿಶ್ರಮದ ಅಗತ್ಯವಿದೆ. ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಕೇಳಿಬರಲಿದೆ. ಸಂಗೀತ, ನಾಟ್ಯಕಲೆಗಳ ಕಲಾವಿದರಿಗೆ ಪ್ರಶಸ್ತಿ ಬರಲಿದೆ.

ಮಕರ: ಬೇರೆಯವರಿಂದ ಏನನ್ನೂ ಅಲಿಸುವುದು ನಿಮಗಿಷ್ಟವಾದ ವಿಷಯ. ಆದರೆ ಅಲ್ಲಸಲ್ಲದ ಆರೋಪಗಳನ್ನು ಮೌನದಿಂದ ಆಲಿಸಬೇಡಿರಿ. ಇಲ್ಲದಿದ್ದಲ್ಲಿ ನಿಮ್ಮ ತಲೆ ಮೇಲೆ ಗೂಬೆ ಕೂರಿಸಿಯಾರು. ತಾಳ್ಮೆಗೆ ಮಿತಿ ಇರಲಿ.

ಕುಂಭ: ಸ್ವತಂತ್ರ ಜೀವನದ ಆಪೇಕ್ಷೆಯಿಂದ, ಪರಿಶ್ರಮದಿಂದ ಎಲ್ಲವನ್ನೂ ಪಡೆಯುವ ಆಸಕ್ತಿ ನಿಮಗಿರಬಹುದು. ವೈಯಕ್ತಿಕ ಲಾಭವನ್ನು ಪರಿಗಣಿಸದಿರಿ. ಒಳ್ಳೆಯ ಗೌರವ, ಮಾನ್ಯತೆ ಹಾಗೂ ಪ್ರಶಂಸೆಯು ನಿಮ್ಮದಾಗಲಿದೆ.

ಮೀನ: ರಾಜಕೀಯದವರಿಗೆ ರಾಜಕೀಯದಲ್ಲಿ ಸ್ಥಾನ ಬಲಪಡಿಸುವ ಅವಕಾಶ ಬಂದು ಮುನ್ನಡೆ ತೋರಿಬರಲಿದೆ. ವೃತ್ತಿಯಲ್ಲಿ ನಿಮ್ಮ ಹಿತಶತ್ರುಗಳು ನಿಮ್ಮನ್ನು ಹೆದರಿಸಿಯಾರು. ಒಳ್ಳೆಯವರೆಂದು ನಂಬಿಕೆ ನಿಮಗೆ ಬೇಡ.

Advertisement

Udayavani is now on Telegram. Click here to join our channel and stay updated with the latest news.

Next