Advertisement

ದಿನಭವಿಷ್ಯ: ಈ ರಾಶಿಯವರು ದೇಹಾರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ

08:13 AM Apr 17, 2021 | Team Udayavani |

ಮೇಷ: ರಾಜಕೀಯ ವರ್ಗಗಳಲ್ಲಿ ಪಕ್ಷ ಪಕ್ಷದ ನಡುವೆ ತಿಕ್ಕಾಟ ಪ್ರಾರಂಭವಾಗಿ ಮನಸ್ಸು ಕೆಡಲಿದೆ. ವಿದ್ಯಾರ್ಥಿಗಳು ಪ್ರಯತ್ನಬಲದಲ್ಲಿ ಮುನ್ನಡೆಯಬೇಕು. ಪಾಲು ಬಂಡವಾಳ ವ್ಯವಹಾರದಲ್ಲಿ ಅತೀ ಜಾಗ್ರತೆ ಮಾಡಿರಿ.

Advertisement

ವೃಷಭ: ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯ ಕಂಡುಬರುವುದು. ಕಾರ್ಯಕ್ಷೇತ್ರದಲ್ಲಿ ಹಿತಶತ್ರುಗಳ ಕಾಟ ಕಿರಿಕಿರಿ ಎನಿಸಲಿದೆ. ಕೆಲವು ಗ್ರಹಗಳ ಒಳ್ಳೆಯ ನಡೆಯಿಂದ ಅನುಕೂಲವಾಗಲಿದೆ.

ಮಿಥುನ: ಶುಭಮಂಗಲ ಕಾರ್ಯಗಳಿಗೆ ಅನುಕೂಲವಾಗಿ ಯೋಗ ವಯಸ್ಕರಿಗೆ ಕಂಕಣಬಲ ಕೂಡಿ ಬರಲಿದೆ. ವ್ಯಾಪಾರಿ ವರ್ಗದವರಿಗೆ ಆದಾಯವು ಹೆಚ್ಚಲಿದೆ. ದೇಹಾರೋಗ್ಯದ ಬಗ್ಗೆ ಚಿಂತೆ ಬೇಡ. ಅಭಿವೃದ್ಧಿ ಇರುತ್ತದೆ.

ಕರ್ಕ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ದೃಢ ನಿರ್ಧಾರಗಳು ಮುಂದಿನ ಬೆಳವಣಿಗೆಗೆ, ಅಭಿವೃದ್ಧಿಗೆ ಪೂರಕವಾಗಲಿದೆ. ಪ್ರಯತ್ನಬಲಕ್ಕೆ ಹೆಚ್ಚು ಒತ್ತು ನೀಡಿ ಮುನ್ನಡೆದರೆ ಉತ್ತಮ.

ಸಿಂಹ: ಉದ್ಯೋಗರಂಗದಲ್ಲಿ ಒತ್ತಡಗಳಿಂದ ತಪ್ಪುಗಳು ಘಟಿಸಬಹುದು. ಸ್ವಲ್ಪ ಸಾವಧಾನದಿಂದ ಯೋಚಿಸಿ ಮುನ್ನಡೆಯಿರಿ. ಧನಾಗಮನಕ್ಕಿಂತ ಅಧಿಕ ಖರ್ಚುಗಳು ಕಂಡು ಬರುವುದು. ಲೆಕ್ಕ ಸರಿಯಾಗಿರಲಿ.

Advertisement

ಕನ್ಯಾ: ಚಾಣಾಕ್ಷರಾದ ನಿಮಗೆ ವೃತ್ತಿರಂಗದಲ್ಲಿ ಸ್ಥಾನ ಪ್ರಾಪ್ತಿಯಿಂದ ಮುನ್ನಡೆಗೆ ಸಾಧಕವಾಗಲಿದೆ. ಸ್ಥಗಿತಗೊಂಡ ಕೆಲಸಕಾರ್ಯಗಳು ಪುನಃಹ ಚಾಲನೆಗೆ ಬರಲಿದೆ. ಗುರುಗಳ, ಹಿರಿಯರ ಅನುಗ್ರಹವು ನಿಮ್ಮ ಮೇಲಿದೆ.

ತುಲಾ: ಸರಕಾರೀ ನೌಕರರಿಗೆ ಮುಂಭಡ್ತಿ ಯೋಗವಿದೆ. ಶಿಕ್ಷಣ ಕ್ಷೇತ್ರ ವೃತ್ತಿ ನಿರತರಿಗೆ ಕಾರ್ಯಭಾರ ಅಧಿಕವೆನಿಸಿದರೂ ಲಾಭವಿದೆ. ಮನೆಯಲ್ಲಿ ಪತ್ನಿ , ಮಕ್ಕಳಿಂದ ಅಧಿಕ ಸಹಕಾರ ಕೂಡಿಬಂದೀತು. ಶುಭವಿದೆ.

ವೃಶ್ಚಿಕ: ಆಗಾಗ ನಿರೀಕ್ಷಿತ ಕಾರ್ಯಸಿದ್ಧಿಯಿಂದ ಸಮಾಧಾನ ಸಿಗಲಿದೆ. ಹಿರಿಯರ ಸೂಕ್ತ ಸಲಹೆ ಗಳನ್ನು ಸ್ವೀಕರಿಸಿರಿ. ಯೋಗ್ಯ ವಯಸ್ಕರಿಗೆ ಅಡೆತಡೆಗಳು ಕಂಡುಬಂದರೂ ಕಂಕಣಬಲದ ಪ್ರಾಪ್ತಿ ಇದೆ. ಜಾಗ್ರತೆ ಇರಲಿ.

ಧನು: ರಾಜಕೀಯದಲ್ಲಿ ನಿಮ್ಮ ಪರಿಶ್ರಮ ಸಾರ್ಥಕವಾಗಲಿದೆ. ಗೃಹ ನಿವೇಶನದ ಖರೀದಿ ನಡೆದೀತು. ಆಗಾಗ ವಿಘ್ನ ಪರಂಪರೆಗಳು ಅನುಭವಕ್ಕೆ ಬರುವುದು. ವಿದ್ಯಾರ್ಥಿಗಳಿಗೆ ಆಶಾಭಂಗವಾದೀತು. ಧೈರ್ಯ ಮಾಡುವುದು.

ಮಕರ: ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡಿಬರುವುದು. ತಿದ್ದಿ ಸರಿ ಮಾಡಿಕೊಳ್ಳಿರಿ. ಜೀವನದಲ್ಲಿ ಉತ್ಕಟ ಇಚ್ಛೆಗಳು ನಿಮ್ಮ ಮುನ್ನಡೆಗೆ ಕಾರಣವಾದಾವು. ಯಶಸ್ಸು ಇದೆ.

ಕುಂಭ: ಆಗಾಗ ದ್ವಂದ ಸ್ವಭಾವ ಕಾಡಲಿದ್ದು ಮುನ್ನಡೆಗೆ ವಿಳಂಬವಾದೀತು. ಚಿಂತಿತ ಕೆಲಸಗಳು ಕಾರ್ಯರೂಪಕ್ಕೆ ಬಂದರೂ ಅಡೆತಡೆಗಳು ಎದುರಾಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಹಿನ್ನಡೆ ತೋರಿಬರಲಿದೆ.

ಮೀನ: ವ್ಯಾಪಾರ, ವ್ಯವಹಾರಗಳಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಶತ್ರುಕಾಟ ತೋರಿಬರುವುದು. ಸಂಚಾರದಿಂದ ಲಾಭ ಉಂಟಾಗಲಿದೆ. ವ್ಯಾಪಾರಿಗಳಿಗೆ ಲಾಭ ಇದ್ದರೂ ಖರ್ಚು ಅಷ್ಟೇ ಕಂಡುಬಂದೀತು. ಮುನ್ನಡೆಯಿರಿ.

Advertisement

Udayavani is now on Telegram. Click here to join our channel and stay updated with the latest news.

Next