Advertisement

ಇಂದಿನ ಗ್ರಹಬಲ: ಈ ರಾಶಿಯವರಿಂದು ವಂಚನೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ

07:12 AM Jun 10, 2021 | Team Udayavani |

10-06-2021

Advertisement

ಮೇಷ: ಕೌಟುಂಬಿಕವಾಗಿ ಬಂಧುಮಿತ್ರರ ಓಲೈಕೆ ಹಿತವೆನಿಸೀತು. ಕೆಲವೊಂದು ವಿಚಾರಗಳ ಬಗ್ಗೆ ಗೊಂದಲಗಳು ಇರಬಹುದು. ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯವಾಗಿದೆ. ಹಣಕಾಸಿನ ಬಗ್ಗೆ ಜಾಗ್ರತೆ ಮಾಡಿರಿ.

ವೃಷಭ: ಖರ್ಚುಗಳ ವಿಷಯದಲ್ಲೂ ಜಾಗ್ರತೆ ಇರಲಿ. ಸಾಮಾಜಿಕ ಸಂಪರ್ಕಗಳನ್ನು ಗಟ್ಟಿಗೊಳಿಸಿಕೊಳ್ಳಿರಿ. ವಾರದ ಆರಂಭದಲ್ಲಿ ದೂರ ಸಂಚಾರದ ಸಾಧ್ಯತೆ ತಂದೀತು. ಅವಿವಾಹಿತರು ಆಯ್ಕೆ ಪರಿಶೀಲಿಸಿ ಮುನ್ನಡೆಯಿರಿ.

ಮಿಥುನ: ಆರೋಗ್ಯವು ಎಲ್ಲಾ ವಿಚಾರಗಳಿಗಿಂತ ಹೆಚ್ಚು ಎಂಬುದನ್ನು ಅರಿತುಕೊಳ್ಳಿರಿ. ಅನಿರೀಕ್ಷಿತ ಶುಭ ಸಮಾಚಾರದಿಂದ ಕಾರ್ಯಸಿದ್ಧಿಯಾಗಲಿದೆ. ಕಾರ್ಯರಂಗದಲ್ಲಿ ಸ್ವಯಂಪ್ರಜ್ಞೆ ಯಾ ಪ್ರಯತ್ನಬಲಕ್ಕೆ ಒತ್ತು ನೀಡಿರಿ.

ಕರ್ಕ: ಸಣ್ಣ ಸಣ್ಣ ವಿಚಾರದಲ್ಲಿ ಉದ್ವೇಗ, ಅಸಹನೆಗೆ ಬಲಿಯಾಗದಿರಿ. ನಿರುದ್ಯೋಗಿಗಳಿಗೆ ಉದೋಗ ಲಾಭ ತೋರಿ ಬಂದು ಸಮಾಧಾನ ತರಲಿದೆ. ಹಣಕಾಸಿನ ವಿಚಾರದಲ್ಲಿ ಆಗಾಗ ಆತಂಕಕ್ಕೆ ಕಾರಣವಾಗದಂತೆ ಎಚ್ಚರ ವಹಿಸಿರಿ.

Advertisement

ಸಿಂಹ: ನೀವು ವಂಚನೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಕ್ರಯ ವಿಕ್ರಯದಲ್ಲಿ ತುಸು ಲಾಭ ಕಂಡುಬಂದು ಸಮಾಧಾನವಿದೆ. ಗುರುಬಲದಿಂದ ಅದೃಷ್ಟದ ಆಸರೆ ನಿಮ್ಮ ಪಾಲಿಗಿದೆ. ಎಣಿಕೆಗಳೆಲ್ಲಾ ಈಡೇರಲಿದೆ.

ಕನ್ಯಾ: ಧೈರ್ಯ, ಪ್ರಯತ್ನಬಲದಿಂದ ಕಾರ್ಯ ಸಾಧಿಸಿದರೆ ಯಶಸ್ಸು ನಿಮ್ಮ ಪಾಲಿಗಿದೆ. ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಮುನ್ನಡೆಯಿರಿ. ಆಗಾಗ ಭಿನ್ನಾಭಿಪ್ರಾಯದಿಂದ ಕಾರ್ಯ ಸಾಧಿಸುವುದು ಕಷ್ಟವಾದೀತು.

ತುಲಾ: ಅವಿವಾಹಿತರಿಗೆ ವೈವಾಹಿಕ ಜೋಡಣೆ ಸಂತಸ ತಂದೀತು. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ತಂದರೂ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ನಿಗಾ ವಹಿಸಿರಿ. ಉದ್ಯೋಗ, ಕಾರ್ಯರಂಗದಲ್ಲಿ ಸಮರ್ಪಕವಾಗಿ ಮುನ್ನಡೆಯಿರಿ.

ವೃಶ್ಚಿಕ: ಸಾಂಸಾರಿಕವಾಗಿ ಆತ್ಮೀಯರು ಮಧ್ಯಸ್ಥಿಕೆ ವಹಿಸಬೇಕಾದ ಸಂಧಿಗ್ಧತೆ ಕಂಡು ಬಂದೀತು. ತ್ರಾಸದಾಯಕವಾಗಲಿರುವ ನ್ಯಾಯಾಲಯದ ಪ್ರಕರಣವು ಕಿರಿಕಿರಿಯೆನಿಸಲಿದೆ. ಆದಾಯ ವ್ಯತ್ಯಯದಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದೀತು.

ಧನು: ಹಿರಿಯರ ಅಭಿಪ್ರಾಯ ಭೇದದಿಂದ ಶುಭಮಂಗಲ ಕಾರ್ಯಗಳು ವಿಳಂಬವಾಗುತ್ತವೆ. ಗೃಹದಲ್ಲಿ ಅಧಿಕ ರೂಪದಲ್ಲಿ ಖರ್ಚುಗಳು ತೋರಿಬರಲಿವೆ. ಅವಕಾಶಗಳು ಕೂಡಿ ಬರಲು ನಿಧಾನವಾದರೂ ನಿಶ್ಚಿತ ರೂಪದಲ್ಲಿ ಅಭಿವೃದ್ಧಿ ಇದೆ.

ಮಕರ: ಆರ್ಥಿಕವಾಗಿ ಹಣಕಾಸಿನ ಸಂಪಾದನೆ ಉತ್ತಮವಿದ್ದರೂ ಬರಬೇಕಾದ ಬಾಕಿ ಹಣಕ್ಕಾಗಿ ಒದ್ದಾಟ ತಂದೀತು. ವಿಶ್ವಾಸದ ದುರುಪಯೋಗವಾಗದಂತೆ ಗಮನಹರಿಸ ಬೇಕಾಗುತ್ತದೆ. ಅವಿವಾಹಿತರ ಪ್ರಯತ್ನಬಲಕ್ಕೆ ಉತ್ತರ ಸಿಗಲಿದೆ.

ಕುಂಭ: ಅನಾವಶ್ಯಕವಾಗಿ ಸಮಯ ವ್ಯರ್ಥವಾಗದಂತೆ ಕಾಳಜಿ ವಹಿಸಿದರೆ ಉತ್ತಮ. ದಾಂಪತ್ಯ ಜೀವನವು ಸಮಾಧಾನಕರವಾಗಲಿದೆ. ನಿರೀಕ್ಷಿತ ರೀತಿಯಲ್ಲಿ ಕೆಲಸಕಾರ್ಯಗಳು ನಡೆದರೂ ಕಿರಿಕಿರಿಯು ತಪ್ಪಲಾರದು. ಜಾಗ್ರತೆ ಮಾಡುವುದು.

ಮೀನ: ಯಾವುದೇ ವಿಚಾರದಲ್ಲಿ ನಿರಾಸೆಗೊಳ್ಳದಿರಿ. ಹಣಕಾಸಿನ ಸ್ಥಿತಿಯು ಆಗಾಗ ಏರುಪೇರಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ವಿದ್ಯಾರ್ಥಿಗಳ ನಿರೀಕ್ಷೆಯ ಫ‌ಲವು ಸದ್ಯದ ಸ್ಥಿತಿಯಲ್ಲಿ ತೃಪ್ತಿದಾಯಕವಾಗಲಾರದು. ಮುನ್ನಡೆಯಿರಿ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next