Advertisement

ಈ ರಾಶಿಯವರಿಗೆ ನಾನಾ ರೀತಿಯಲ್ಲಿ ಹಣ ಸಂಗ್ರಹವಾದರೂ ಎಚ್ಚರಿಕೆಯ ಅಗತ್ಯವಿದೆ.

07:05 AM May 20, 2021 | Team Udayavani |

20-5-2021

Advertisement

ಮೇಷ: ವೃತ್ತಿರಂಗದಲ್ಲಿ ನಿಮ್ಮ ದುಡಿಮೆ ವೃತ್ತಿ ಬದುಕಿನ ಮೇಲೆ ಭಾರೀ ಪರಿಣಾಮ ಬೀರುವ ದಿನಗಳಾಗಲಿವೆ. ಸದುಪಯೋಗಿಸಿಕೊಳ್ಳಿರಿ. ಸಾಂಸಾರಿಕವಾಗಿ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವುದು ನಿಮ್ಮ ಮೇಲಿದೆ.

ವೃಷಭ: ರಾಜಕೀಯ ವರ್ಗದವರಿಗೆ ಎಷ್ಟೋ ದಿನಗಳಿಂದ ನಿರೀಕ್ಷಿಸಿರುವ ಕೆಲಸ ಕಾರ್ಯಗಳ ಚಾಲನೆಗೆ ಸೂಕ್ತ ಕಾಲವಿದು. ಗೃಹದಲ್ಲಿ ಮಿತ್ರ ಬಾಂಧವರ ಆಗಮನದಿಂದ ಸಂತಸವಾಗಲಿದೆ. ನಿಮ್ಮ ಕರ್ತವ್ಯವನ್ನು ಪಾಲಿಸಿರಿ.

ಮಿಥುನ: ಹಿನ್ನಡೆಗೊಂಡ ವೈವಾಹಿಕ ಸಂಬಂಧಗಳು ಪುಷ್ಟಿಗೊಳ್ಳಲಿದೆ. ತಾತ್ಕಾಲಿಕ ಉದ್ಯೋಗಗಳು ಖಾಯಂ ಆಗುವ ಸೂಚನೆ ತಂದೀತು. ಆರ್ಥಿಕವಾಗಿ ನಾನಾ ರೀತಿಯಲ್ಲಿ ಹಣ ಸಂಗ್ರಹವಾದರೂ ಎಚ್ಚರಿಕೆಯ ಅಗತ್ಯವಿದೆ.

ಕರ್ಕ: ವಿದ್ಯಾರ್ಥಿಗಳಿಗೆ ಬದಲಾವಣೆಯ ಸಾಧ್ಯತೆ ತೋರಿಬರುತ್ತದೆ. ವೃತ್ತಿರಂಗದಲ್ಲಿ ಅವಸರ, ದುಡುಕು ನಿರ್ಧಾರಗಳ ಬಗ್ಗೆ ಯೋಚಿಸುವಂತಾದೀತು. ಸಾಂಸಾರಿಕವಾಗಿ ಹೆಂಡತಿ, ಮಕ್ಕಳಿಂದ ಸಹಕಾರ ದೊರಕಲಿದೆ.

Advertisement

ಸಿಂಹ: ಆತ್ಮವಿಮರ್ಶೆಗೆ ಸಕಾಲವಿದು. ವೃತ್ತಿರಂಗದಲ್ಲಿ ಭವಿಷ್ಯ ನಿರ್ಧಾರವಾಗಲಿದೆ. ಆರ್ಥಿಕವಾಗಿ ವಿವಿಧ ರೀತಿಯ ಅನುಕೂಲಗಳು ತೋರಿಬರುತ್ತದೆ. ವೈವಾಹಿಕ ಮಾತುಕತೆಗಳು ನಿಮ್ಮ ಪರವಾಗಲಿದೆ.

ಕನ್ಯಾ: ಧಾರ್ಮಿಕವಾಗಿ, ಸಾಮಾಜಿಕವಾಗಿ ಹೊಸ ಆಯಾಮವಿದೆ. ಅರ್ಧಂಬರ್ಧಗೊಂಡ ಕೆಲಸ ಕಾರ್ಯಗಳು ಪುನಃ ಚಾಲನೆಗೆ ಬರಲು ಇದು ಸಕಾಲವಾಗಿದೆ. ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಪ್ರಗತಿಯಿಂದ ಸಂತಸವಿದೆ.

ತುಲಾ: ಹಂತಹಂತವಾಗಿ ಶತ್ರುಗಳ ಪ್ರಭಾವವು ಕ್ಷೀಣಿಸಲಿದೆ. ಸಾಹಿತಿಗಳಿಗೆ ಬರವಣಿಗೆಯಿಂದ ಉತ್ತಮ ಆದಾಯವು ತೋರಿಬರುವುದು. ಕಾರ್ಯಕ್ಷೇತ್ರದಲ್ಲಿ ಆಗಾಗ ವಿಘ್ನಗಳು ತೋರಿಬರಲಿದೆ. ತಾಳ್ಮೆಯಿಂದ ವರ್ತಿಸಿರಿ.

ವೃಶ್ಚಿಕ: ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭವಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ಮಾಡುವುದು. ವೃತ್ತಿರಂಗದಲ್ಲಿ ಹಿತಶತ್ರುಗಳಿಂದ ಆಗಾಗ ಮನಸ್ಸಿಗೆ ತೊಳಲಾಟವನ್ನು ಅನುಭವಿಸುವಂತಾದೀತು. ಶುಭವಿದೆ.

ಧನು: ಸಾಂಸಾರಿಕವಾಗಿ ಬೇಡಿಕೆ, ಈಡೇರಿಕೆಗಳ ಕಿರಿಕಿರಿಯ ಕಾಲವಿದು. ಕೌಟುಂಬಿಕವಾಗಿ ಸಂಬಂಧಗಳನ್ನು ಗಟ್ಟಿಗೊಳಿಸಬೇಕಾಗುತ್ತದೆ. ಅವಿವಾಹಿತರಿಗೆ ಅಚ್ಚರಿಯ ಕಂಕಣಭಾಗ್ಯದ ಯೋಗ ತಂದೀತು. ಜಾಗ್ರತೆ ಅಗತ್ಯ.

ಮಕರ: ನಿಮ್ಮ ವೈಯಕ್ತಿಕ ವಿಚಾರದಲ್ಲಿ ನೀವೇ ಹತೋಟಿಯನ್ನು ಇಟ್ಟುಕೊಳ್ಳುವುದು ಅಗತ್ಯವಿದೆ. ಹಾಗೆಂದು ವೃತ್ತಿರಂಗದಲ್ಲಿ ನಿಮ್ಮ ಸ್ವಾಭಿಮಾನಕ್ಕೆ ತೀರಾ ಚ್ಯುತಿಯೇನೂ ತೋರಿಬಾರದು. ಸಿಟ್ಟು ಸಿಡುಕು ಅದುಮಿರಿ.

ಕುಂಭ: ನಿಮ್ಮ ಪರಿಶ್ರಮ, ಆತ್ಮವಿಶ್ವಾಸ, ದೃಢನಿರ್ಧಾರಗಳು ಕಾರ್ಯಸಾಧನೆಗೆ ಅನುಕೂಲವಿರುತ್ತದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಅಧಿಕವಾಗಲಿದೆ. ಈ ಮಧ್ಯೆ ಅನಿರೀಕ್ಷಿತ ಧನಾಗಮನವಿದೆ.

ಮೀನ: ತಾಳ್ಮೆ ಸಮಾಧಾನದಿಂದ ಮಾತನ್ನುಆಡಿರಿ. ಇಲ್ಲದಿದ್ದಲ್ಲಿ ಕಷ್ಟವಾದೀತು. ಕೌಟುಂಬಿಕ ಸಮಸ್ಯೆಗಳು ಆಗಾಗ ಋಣಾತ್ಮಕ ಚಿಂತನೆಗೆ ಗುರಿ ಮಾಡಲಿದೆ. ಕಾರ್ಯರಂಗದಲ್ಲಿ ಎಡರುತೊಡರುಗಳಿದ್ದರೂ ಅಭಿವೃದ್ಧಿ ಇದೆ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next