Advertisement

ಪ್ರಣಯ ಪ್ರಸಂಗಗಳಲ್ಲಿ ಅಡೆತಡೆ; ಆರ್ಥಿಕವಾಗಿ ಏರುಪೇರು: ಇಂದಿನ ಗ್ರಹಬಲ !

07:18 AM Jun 02, 2021 | Team Udayavani |

ಮೇಷ: ನಿಮ್ಮ ಕೆಲಸಕಾರ್ಯಗಳನ್ನು ಆತ್ಮವಿಶ್ವಾಸದಿಂದ ಮುಂದುವರಿಸಿಕೊಂಡು ಹೋದರೆ ಅನುಕೂಲವಾಗಲಿದೆ. ಹಾಗೆಂದು ಅತೀ ವಿಶ್ವಾಸ ಮಾಡದಿರಿ. ನಿಮ್ಮ ಹಿತಶತ್ರುಗಳು ಪೈಪೋಟಿಯನ್ನು ಸುಮ್ಮನೆ ಸೃಷ್ಟಿಸಬಹುದು.

Advertisement

ವೃಷಭ: ಆರ್ಥಿಕವಾಗಿ ಸ್ವಲ್ಪ ಏರುಪೇರು ಕಂಡು ಬರಲಿದೆ. ಅತಿಯಾದ ಖರ್ಚು ಕಂಡು ಬಂದು ಮನಸ್ಸು ಕೆಟ್ಟಿತು. ಹಣಕಾಸಿನ ಬಗ್ಗೆ ಸಮತೋಲನವನ್ನು ಕಾಯ್ದುಕೊಳ್ಳಿರಿ. ಯಾವುದೇ ವಿಚಾರದಲ್ಲಿ ಯಾರೊಂದಿಗೂ ಸಂಘರ್ಷಕ್ಕಿಳಿಯದಿರಿ.

ಮಿಥುನ: ಪ್ರಣಯ ಪ್ರಸಂಗಗಳಲ್ಲಿ ಅಡೆತಡೆಗಳು ತೋರಿಬಂದಾವು. ಅನಿರೀಕ್ಷಿತವಾಗಿ ಸ್ನೇಹಿತನ ಸಹಾಯದಿಂದ ಮುನ್ನಡೆ ಕಂಡುಬಂದೀತು. ಚಿಂತೆ ಮಾಡುವುದು ಬೇಡ. ಕೌಟುಂಬಿಕವಾಗಿ ಬಂಧುಮಿತ್ರರ ಓಲೈಕೆ ಹಿತವೆನಿಸಲಿದೆ.

ಕರ್ಕ: ಓತಪ್ರೇತವಾಗಿ ಧನ ವಿನಿಯೋಗ ಮಾಡದಿರಿ. ದಾಯಾದಿಗಳ ಕಲಹ, ವೈರತ್ವದಿಂದ ಮನಸ್ಸಿಗೆ ನೋವಾದೀತು. ತಾಳ್ಮೆ ಇರಲಿ. ಹಾಳು ಅಭ್ಯಾಸದ ಮಿತ್ರರ ಸಹವಾಸ ದಿಂದ ಅವಮಾನವಾಗಲಿದೆ. ವಾತೋಪದ್ರವವು ಕಂಡುಬರಲಿದೆ.

ಸಿಂಹ: ನಿವೇಶನ ಖರೀದಿಗೆ ನಾನಾ ರೀತಿಯ ಅವಕಾಶಗಳು ಒದಗಿ ಬರುವುದು. ವಿದ್ಯಾಭ್ಯಾಸದಲ್ಲಿ ಪ್ರಯತ್ನಕ್ಕೆ ತಕ್ಕ ಬೆಲೆ ಸಿಗಲಿದೆ. ಕೆಲವೊಂದು ವಿಚಾರಗಳ ಬಗ್ಗೆ ಗೊಂದಲಗಳು ಮೂಡಬಹುದು. ತಾಳ್ಮೆಯಿಂದ ವ್ಯವಹರಿಸಿರಿ.

Advertisement

ಕನ್ಯಾ: ಉದ್ವೇಗ, ಕೋಪ, ಹಠ ಕಡಿಮೆ ಮಾಡಿ. ಇತರರೊಂದಿಗೆ ವ್ಯವಹರಿಸಿದರೆ ಉತ್ತಮವಾದೀತು. ಹಣಕಾಸಿನ ವಿಚಾರದಲ್ಲಿ ಬೆಳವಣಿಗೆಗೆ ಅವಕಾಶವಿರುತ್ತದೆ. ಖರ್ಚಿನ ವಿಷಯದಲ್ಲೂ ಜಾಗ್ರತೆ ಮಾಡಿರಿ. ಶುಭ ವಾರ್ತೆ ಇದೆ.

ತುಲಾ: ಸಾಮಾಜಿಕ ಸಂಪರ್ಕಗಳನ್ನು ಗಟ್ಟಿಯಾಗಿಸಿಕೊಳ್ಳಿರಿ. ದೂರದ ಸಂಚಾರವನ್ನು ಕಡಿಮೆ ಮಾಡಿರಿ. ಅವಿವಾಹಿತರು ಮುಂದಿರುವ ಆಯ್ಕೆಗಳನ್ನು ಪರಿಶೀಲಿಸಿ ಮುನ್ನಡೆಯಿರಿ. ಉತ್ತಮ ಆರೋಗ್ಯವು ಎಲ್ಲಕ್ಕಿಂತ ಹೆಚ್ಚು .

ವೃಶ್ಚಿಕ: ಕೌಟುಂಬಿಕವಾಗಿ ನಂಬಿದವರೇ ನಿಮಗೆ ಕೈಕೊಟ್ಟಾರು. ಹಣಕಾಸಿನ ಸ್ಥಿತಿಯು ಸುಧಾರಿಸುತ್ತಾ ಹೋದರೂ ಯಾವುದೇ ಪರಿಸ್ಥಿತಿಯನು ° ತಾಳ್ಮೆ – ಸಮಾಧಾನದಿಂದ ಎದುರಿಸಬೇಕು. ಕೊಟ್ಟ ಸಾಲವು ಮರಳಿ ಬಾರದು.

ಧನು: ಸಾಂಸಾರಿಕವಾಗಿ ಸಂಬಂಧಗಳು ಸಡಿಲಗೊಳ್ಳಲಿದೆ. ಪ್ರಬುದ್ಧರಾಗಿ ಚಿಂತಿಸಬೇಕಾಗುತ್ತದೆ. ವೃತ್ತಿರಂಗದಲ್ಲಿ ದಿನಗಳು ಸರಾಗವಾಗಿ ನಡೆದುಹೋದರೂ ಕಿರಿಕಿರಿ ತಪ್ಪಲಾರದು. ವಿದ್ಯಾರ್ಥಿಗಳು ಪ್ರಬುದ್ಧರಾಗಿ ಚಿಂತಿಸಬೇಕಾದೀತು.

ಮಕರ: ನಿಮಗೆ ಮಹತ್ವದ ದಿನಗಳಿವು. ಪ್ರೀತಿಪಾತ್ರರೊಂದಿಗೆ ಆತ್ಮೀಯವಾಗಿ ಕಳೆಯುವಂತಾದೀತು. ವೃತ್ತಿರಂಗದಲ್ಲಿ ನಾನಾ ರೀತಿಯಲ್ಲಿ ಸಮಸ್ಯೆಗಳು ತೋರಿಬಂದರೂ ಎದುರಿಸುವಂತಹ ಛಾತಿ ನಿಮಗಿರುತ್ತದೆ. ಧೈರ್ಯವಿರಲಿ.

ಕುಂಭ: ಗ್ರಹಗತಿಗಳು ನಿಮಗಿಂದು ಪೂರಕವಾಗಿರುವ ಕಾರಣ ಯಾವುದೇ ಕಾರಣಕ್ಕೆ ಮುಂದುವರಿಯುವ ಸಾಧ್ಯತೆ ಇದೆ. ಖಾಸಗಿ ಬದುಕಿನಲ್ಲಿ ನಿರಾಸೆ ಸಣ್ಣಪುಟ್ಟ ವಿಚಾರದಲ್ಲಿ ಕಂಡು ಬಂದೀತು. ನಿಮ್ಮ ಜೀವನ ಶೈಲಿ ಬದಲಾಗಲಿದೆ.

ಮೀನ: ಗೃಹ ಪುನರ್‌ ನವೀಕರಣಕ್ಕೆ ಇದು ಸಕಾಲ. ಖರ್ಚುವೆಚ್ಚಗಳು ಮಿತಿ ಮೀರಬಹುದು. ಉತ್ತಮ ಗೃಹಗಳ ಲಾಭವು ನಿಮಗೆ ಒದಗಿ ಬರಲಿದೆ. ಈ ಸಮಯವು ಶುಭಕಾಲವಾಗಿದ್ದುದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next