Advertisement

Daily Horoscope: ಸ್ತ್ರೀಯರ ಸಹಾಯದಿಂದ ಉತ್ತಮ ಸಂಪತ್ತು ಪ್ರಾಪ್ತಿ

07:15 AM Apr 19, 2023 | Team Udayavani |

ಮೇಷ: ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ. ನೂತನ ಮಿತ್ರರ ಸಮಾಗಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಸುಖ. ಅರಣ್ಯ ಪ್ರದೇಶ ಮಾರ್ಗ ಪ್ರಯಾಣ. ಸುಖದುಃಖ ಅನುಭವ. ಧನಾರ್ಜನೆ, ಮನೋರಂಜನೆಗೆ ಕೊರತೆ ಇರದು.

Advertisement

ವೃಷಭ: ಸ್ತ್ರೀಯರ ಸಹಾಯದಿಂದ ಉತ್ತಮ ಸಂಪತ್ತು ಪ್ರಾಪ್ತಿ. ದಾಂಪತ್ಯ ಸುಖ. ಮಕ್ಕಳ ವಿಚಾರದಲ್ಲಿ ಚರ್ಚೆ, ಗೊಂದಲಕ್ಕೆ ಅವಕಾಶ ನೀಡದಿರಿ. ರಾಜಕೀಯ ಕಾರ್ಯದಲ್ಲಿ ಪ್ರಗತಿ. ಗೃಹೋಪ ವಸ್ತುಗಳ ಖರೀದಿಗೆ ಧನವ್ಯಯ.

ಮಿಥುನ: ಜಲೋತ್ಪನ್ನ ವಸ್ತುಗಳ ವ್ಯವಹಾರ ದಿಂದ ಲಾಭ. ಮಿತ್ರರಲ್ಲಿ ಗುರುಹಿರಿಯರಲ್ಲಿ, ಸಹೋದ್ಯೋಗಿಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ ಗುರಿ ತಲುಪಿ. ನಾನಾ ರೀತಿಯ ಸನ್ನಿವೇಶಗಳು ಎದುರಾಗುವ ಸಮಯ. ನಿರೀಕ್ಷಿತ ಧನ ಲಾಭ.

ಕರ್ಕ: ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮಿಂದ ಸಹಾಯ ಪಡೆದುಕೊಳ್ಳುವವರಿಂದ ಮೋಸ ಹೋಗದಿರಿ. ಉದ್ಯೋಗ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫ‌ಲ. ನಿರೀಕ್ಷಿತ ಧನಾಗಮ. ಗೃಹೋಪಯೋಗಿ ವಸ್ತುಗಳು, ವಾಹನಾದಿ ವಿಚಾರದಲ್ಲಿ ಶುಭಫ‌ಲ.

ಸಿಂಹ: ದೀರ್ಘ‌ ಪ್ರಯಾಣ. ದೈಹಿಕ ಶ್ರಮವಿದ್ದರೂ ಉತ್ತಮ ಬುದ್ಧಿಶಕ್ತಿ, ಧೈರ್ಯ, ಉದಾರಾದಿಗುಣಗಳಿಂದ ಕಾರ್ಯಕ್ಷೇತ್ರದಲ್ಲಿ ಜನ ಮನ್ನಣೆ. ಬರಹಗಾರರಿಗೆ, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಗೌರವದ ಆದರದ ಸಮಯ.

Advertisement

ಕನ್ಯಾ: ಮಿತ್ರರಲ್ಲಿ, ಪಾಲುದಾರರಲ್ಲಿ, ಆತ್ಮೀಯರಲ್ಲಿ ಸಂಶಯಕ್ಕೆ ಅವಕಾಶ ನೀಡದೇ ನೇರವಾಗಿ ವ್ಯವಹರಿಸಿ. ನಿರೀಕ್ಷಿತ ಲಾಭ ಪಡೆಯಿರಿ. ಜಲೋತ್ಪನ್ನ ವಸ್ತುಗಳು, ದೀರ್ಘ‌ ಪ್ರಯಾಣದ ವ್ಯವಹಾರಗಳು ಲಾಭದಾಯಕವಾಗಿರುವುದು.

ತುಲಾ: ಧರ್ಮ ಕಾರ್ಯದಲ್ಲಿ ಭಾಗವಹಿಸಿದ ತೃಪ್ತಿ. ಮೇಲಾಧಿಕಾರಿಗಳಿಂದ, ಗುರುಗಳಿಂದ ಪ್ರೋತ್ಸಾಹ, ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷೆ ಗಿಂತಲೂ ಅಧಿಕ ಧನಾರ್ಜನೆ. ವಿದ್ಯಾರ್ಥಿಗಳಿಗೆ ಉತ್ತಮ ಶುಭ ದಿನ ನಿರೀಕ್ಷಿತ ಸ್ಥಾನ ಗೌರವಾದಿ ಸುಖ.

ವೃಶ್ಚಿಕ: ರಫ್ತು ಆಮದು ವ್ಯವಹಾರದಲ್ಲಿ ಉತ್ತಮ ಅವಕಾಶ ಅಭಿವೃದ್ಧಿ. ಆದ್ಯ ಮಹನೀಯರ ಸಂಪರ್ಕದಿಂದ ಸಂತೋಷ. ಅವಿವಾಹಿತರಿಗೆ ಸಂಬಂಧ ಕೂಡಿ ಬರುವ ಕಾಲ. ರಾಜಕೀಯದವರಿಗೆ ಉತ್ತಮ ದಿನ. ಆಹಾರೋದ್ಯಮದಲ್ಲಿ ಪ್ರಗತಿ.

ಧನು: ಗುರುಹಿರಿಯರಲ್ಲಿ , ಮೇಲಾಧಿಕಾರಿಗಳಲ್ಲಿ ಸಹನೆ, ಉದಾರಿತನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಧನಾರ್ಜನೆಗೆ ಕೊರತೆ ಇರದು. ಅನಗತ್ಯ ವಾರ್ತೆಗಳಿಗೆ ಕಿವಿ ಕೊಡದಿರಿ. ಪಾಲುದಾರರು ಪರಸ್ಪರ ಪ್ರೋತ್ಸಾಹಿಸಿ ನಡೆದರೆ ಉತ್ತಮ ಶುಭ ಫ‌ಲ.

ಮಕರ: ವಿದ್ಯಾರ್ಥಿಗಳಿಗೆ ಶ್ರಮದಿಂದ ಕಾರ್ಯ ಲಾಭ. ಮಿತ್ರರಂತೆ ವರ್ತಿಸುವ ವ್ಯಕ್ತಿ ಗಳಿಂದಲೂ ಜಗಳ ಮಾಡುವ ಪ್ರವೃತ್ತಿಯವರಿಂದಲೂ ಇಂದು ನಿಮಗೆ ಸ್ವಲ್ಪ ಕಿರಿಕಿರಿ ತೋರಿದರೂ ಬಹಳ ಬುದ್ಧಿವಂತಿಕೆಯಿಂದ ಸಮಯ ನಿರ್ವಹಿಸಿ ಕಾರ್ಯ ಸಾಧಿಸಿಕೊಳ್ಳಿ.

ಕುಂಭ: ಕಾರ್ಮಿಕರಲ್ಲಿ, ಸಹೋದರ ಸಮಾನರಲ್ಲಿ ನಿಷೂuರ ಮಾಡದೇ, ಪ್ರೋತ್ಸಾಹಿಸಿ ನಿರೀಕ್ಷಿತ ಶುಭಫ‌ಲ ಅನುಭವಿಸಿ. ದೂರ ಪ್ರಯಾಣದಿಂದ ಉತ್ತಮ ಧನಾರ್ಜನೆ. ರಾಜಕೀಯ ಕ್ಷೇತ್ರದವರಿಗೆ ಉನ್ನತ ಅಧಿಕಾರಿಗಳಿಂದ ಲಾಭ.

ಮೀನ: ಮಾತೃ ಸಮಾನರ ಆರೋಗ್ಯದ ಬಗ್ಗೆ ಗಮನಹರಿಸಿ. ಮಿತ್ರರೊಂದಿಗೆ ಸಹನೆಯಿಂದ ವ್ಯವಹರಿಸಿ. ಉದ್ಯೋಗ ಅಭಿವೃದ್ಧಿ. ಕಾರ್ಮಿಕ ವರ್ಗದವರಿಗೆ ಪ್ರೋತ್ಸಾಹಿಸಿ ನಿರೀಕ್ಷಿತ ಲಾಭ ಪಡೆಯಿರಿ. ವಿದ್ಯಾರ್ಥಿಗಳು, ಆಳವಾದ ಅಧ್ಯಯನಶೀಲರಿಗೆ ಉತ್ತಮ ಶುಭಪಲ. ರಾಜಕೀಯ ಕ್ಷೇತ್ರದಲ್ಲಿ ಗುಟ್ಟಿನ ವ್ಯವಹಾರದಿಂದ ಲಾಭ.

Advertisement

Udayavani is now on Telegram. Click here to join our channel and stay updated with the latest news.

Next