Advertisement

ಶನಿವಾರದ ರಾಶಿಫಲ: ಯಾರಿಗೆ ಶುಭ-ಯಾರಿಗೆ ಲಾಭ?

08:16 AM May 14, 2022 | Team Udayavani |

14-05-2022

Advertisement

ಮೇಷ: ವಿದ್ಯಾ ಜ್ಞಾನ ವೃದ್ಧಿ. ನಾಯಕತ್ವ ಗುಣಗಳಿಂದ ಕಾರ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಗೌರವ. ಭ್ರಾತೃಮಾತೃ ಸಮಾನರಿಂದ ಪ್ರೋತ್ಸಾಹ. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ. ಪ್ರಯಾಣ ಸುಖಕರ.

ವೃಷಭ: ಉದ್ಯೋಗದಲ್ಲಿ ಉತ್ತಮ ಬದಲಾವಣೆಗೆ ಅವಕಾಶ. ಸ್ವಾವಲಂಬಿಗಳಾಗಿ ಕಾರ್ಯ ಸಾಧಿಸಿಕೊಳ್ಳುವ ಕಾಲ. ನೂತನ ಮಿತ್ರರ ಸಮಾಗಮ. ಗೃಹೋಪ ವಸ್ತುಗಳ ಸಂಗ್ರಹ. ವಿದ್ಯಾರ್ಥಿಗಳಿಗೆ, ದಂಪತಿಗಳಿಗೆ, ಪಾಲುದಾರಿಕಾ ವ್ಯವಹಾರಸ್ಥರಿಗೆ, ಶುಭ.

ಮಿಥುನ: ಸಂಚಾರದಿಂದ ನಿರೀಕ್ಷಿತ ಸಫ‌ಲತೆ. ಉತ್ತಮ ಧನಾರ್ಜನೆ. ದಂಪತಿಗಳಲ್ಲಿ ಅನುರಾಗ ಪ್ರೋತ್ಸಾಹ. ಉದಾರತೆಯಿಂದಲೂ ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪರಾಕ್ರಮ ಪ್ರದರ್ಶನದಿಂದ ಜನಮನ್ನಣೆ ಗೌರವ ಪ್ರಾಪ್ತಿ.

ಕರ್ಕ: ಧಾರ್ಮಿಕ ಸಾಮಾಜಿಕ ಆರ್ಥಿಕ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡದೇ ತಾಳ್ಮೆ ಸಮಾದಾನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಆರೋಗ್ಯದ ಕಡೆಗೆ ಗಮನಿಸಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಪಾಲುದಾರಿಕಾ ವ್ಯವಹಾರದಲ್ಲಿ ಸಾಮರಸ್ಯಕ್ಕೆ ಆದ್ಯತೆ.

Advertisement

ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಕಾರ್ಯಕ್ಷೇತ್ರದಲ್ಲಿ ಸಫ‌ಲತೆ. ನಿರೀಕ್ಷಿತ ಧನಾಗಮ. ಸಹೋದರಾದಿ ಸಮಾನರಿಂದಲೂ ಕಾರ್ಮಿಕರಿಂದಲೂ ಸುಖ ಲಭಿಸುವ ದಿನ. ಸಹಾಯ ಮಾಡುವಾಗ ಎಚ್ಚರಿಕೆ. ವಿದ್ಯಾರ್ಥಿಗಳಿಗೆ ಅನುಕೂಲ.

ಕನ್ಯಾ: ಉತ್ತಮ ಅಭಿವೃದ್ಧಿ ಇದ್ದರೂ ಆರ್ಥಿಕ ವಿಚಾರದಲ್ಲಿ ಹಿಡಿತವಿರಲಿ. ದಾಕ್ಷಿಣ್ಯ ಪ್ರವೃತ್ತಿಯಿಂದ ಧನ ನಷ್ಟವಾಗುವ ಸಂಭವ. ಪಾಲುದಾರಿಕೆ ವ್ಯವಹಾರಸ್ಥರಿಗೆ ಉತ್ತಮ ಫ‌ಲಿತಾಂಶ ಲಭಿಸುವ ಅವಕಾಶ. ಸಾಂಸಾರಿಕ ಸುಖ ವೃದ್ಧಿ.

ತುಲಾ: ಶಾರೀರಿಕ ಮಾನಸಿಕ ಆರೋಗ್ಯ ವೃದ್ಧಿ. ಗೌರವದಿಂದ ಕೂಡಿದ ಧನಾರ್ಜನೆ. ಸಹೋದರವರ್ಗದಿಂದ ನಿರೀಕ್ಷಿತ ಸಹಾಯ. ಮಕ್ಕಳ ವಿಚಾರದಲ್ಲಿ ಮನೋರಂಜನೆಗಾಗಿ ಧನ ವ್ಯಯ.ದೇವತಾ ಉಪಾಸನೆ ವೃದ್ಧಿ. ಹಿರಿಯರ ಆರೋಗ್ಯ ಉತ್ತಮ.

ವೃಶ್ಚಿಕ: ದೈಹಿಕ ಮಾನಸಿಕ ಆರೋಗ್ಯ ದೃಢತೆ. ರಾಜಕೀಯ, ಸರಕಾರಿ ಕಾರ್ಯಗಳಲ್ಲಿ ಪ್ರಗತಿ. ಅನಿರೀಕ್ಷಿತ ಧನಾರ್ಜನೆ. ಉತ್ತಮ ವಾಕ್‌ಚತುರತೆಯಿಂದ ಕಾರ್ಯ ಸಿದ್ಧಿ. ಸಹೋದರರ ಸಹಾಯ. ವಿದ್ಯಾರ್ಥಿಗಳಿಗೆ ಉನ್ನತ ಸ್ಥಾನ ಸುಖ. ದೇವತಾ ಕಾರ್ಯದಲ್ಲಿ ಶ್ರದ್ಧೆ.

ಧನು: ದೈಹಿಕ ಆರೋಗ್ಯ ತೃಪ್ತಿದಾಯಕ. ಕಾರ್ಯಕ್ಷೇತ್ರದಲ್ಲಿ ಪರರ ಸಹಾಯದಿಂದಲೂ ವೃತ್ತಿ ನಿಷ್ಠೆಯಿಂದಲೂ ಅನಿರೀಕ್ಷಿತ ಧನಾರ್ಜನೆ ಸ್ಥಾನ ಗೌರವಾದಿ ಸುಖ. ಮಿತ್ರರಿಂದ ಸಹಾಯ. ಜನಮನ್ನಣೆ. ದಾಂಪತ್ಯ ಸುಖ, ಲಾಭದಾಯಕ ಪರಿಸ್ಥಿತಿ, ಮಕ್ಕಳ ವಿಚಾರದಲ್ಲಿ ಪ್ರಗತಿ.

ಮಕರ: ಆರೋಗ್ಯ ಅಭಿವೃದ್ಧಿದಾಯಕ. ಹಣಕಾಸಿನ ವಿಚಾರದಲ್ಲಿ ನಿರೀಕ್ಷಿತ ಧನಾಗಮ ಇದ್ದರೂ ಕಷ್ಟಕರ ಪರಿಸ್ಥಿತಿ. ಕಾರ್ಮಿಕ ವರ್ಗದವರಿಗೆ ಅಭಿವೃದ್ಧಿ. ಮಕ್ಕಳ ವಿಚಾರದಲ್ಲಿ ಶ್ರಮ. ಉದ್ಯೋಗದಲ್ಲಿ ಗೌರವ. ಹಿರಿಯರ ಆರೋಗ್ಯ ಗಮನಿಸಿ.

ಕುಂಭ: ದೈಹಿಕ ಆರೋಗ್ಯ ವೃದ್ಧಿ. ಉತ್ತಮ ಧನಾರ್ಜನೆ. ಸಹೋದರ ಬಂಧುಗಳ ಸಹಾಯ. ಮಕ್ಕಳ ವಿಚಾರದಲ್ಲಿ ನೆಮ್ಮದಿ. ಉದ್ಯೋಗ ವ್ಯವಹಾರದಲ್ಲಿ ಜನಮನ್ನಣೆ. ದೈಹಿಕ ಆರೋಗ್ಯದ ಬಗ್ಗೆ ಗಮನಿಸಿ. ದೇವತಾ ಕಾರ್ಯದಿಂದ ಶ್ರೇಯ.

ಮೀನ: ಮಾನಸಿಕ ಪ್ರಪುಲ್ಲತೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಪರಿಸ್ಥಿತಿ. ಕಾರ್ಮಿಕ ವರ್ಗ, ಸಹೋದರ ವರ್ಗದವರಿಗೆ ಪ್ರಯಾಣ ಭಾಗ್ಯ. ಹಿರಿಯರ ಆರೋಗ್ಯ ವೃದ್ಧಿದಾಯಕ. ದೇವತಾ ಸ್ಥಳ ಸಂದರ್ಶನ. ವಿದ್ಯಾರ್ಥಿಗಳಿಗೆ, ಅಧ್ಯಯನಾಸಕ್ತರಿಗೆ ಕಠಿಣ ಪ್ರಯತ್ನದಿಂದ ಯಶಸ್ಸು. ಉದ್ಯೋಗಸ್ಥರಿಗೆ, ವ್ಯಾಪಾರಸ್ಥರಿಗೆ ಶುಭ.

Advertisement

Udayavani is now on Telegram. Click here to join our channel and stay updated with the latest news.

Next