Advertisement

ದರೋಡೆಕೋರನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

09:24 PM May 26, 2021 | Team Udayavani |

ಶಿವಮೊಗ್ಗ  : ನಗರದ ಹೊರವಲಯದ ಪೊಲೀಸ್ ಲೇಔಟ್ ನಲ್ಲಿ  ಸುಲಿಗೆ ನಡೆಸುತ್ತಿದ್ದ ದರೋಡೆಕೋರನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

Advertisement

ಇಂದು ಸಂಜೆ ಪೊಲೀಸ್ ಲೇ ಔಟ್ ಬಳಿ ಬೈಕ್ ಗಳನ್ನು ಅಡ್ಡಗಟ್ಟಿ ಬೈಕ್ ಸವಾರರನ್ನು ದರೋಡೆ‌ ಮಾಡುತ್ತಿದ್ದರು.  ಈ ವೇಳೆ ಸ್ಥಳಕ್ಕಾಗಮಿಸಿದ ಸ್ಥಳೀಯರು ದರೋಡೆಕೋರರನ್ನು ಹಿಡಿಯಲು ಮುಂದಾದರು. ಆಗ ಸ್ಥಳೀಯರ ಕಾರನ್ನು ಜಖಂ ಮಾಡಿದ ದುಷ್ಕರ್ಮಿಗಳು ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆಯೂ ಹಲ್ಲೆ‌ ನಡೆಸಿದ್ದಾರೆ.  ಈ ವೇಳೆ ಸ್ಥಳೀಯರೆಲ್ಲಾ ಒಂದಾಗಿ ಓರ್ವ ದರೋಡೆಕೋರನನ್ನು ಸೆರೆ ಹಿಡಿದಿದ್ದಾರೆ.

ಯಾವಾಗ ಎಲ್ಲ‌ ಸ್ಥಳೀಯರು ಒಟ್ಟಾಗಿ ಬಂದರೋ ಆಗ ಇನ್ನುಳಿದ ನಾಲ್ವರು ದರೋಡೆಕೋರರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಸೆರೆಹಿಡಿದ ದರೋಡೆಕೋರನನ್ನು ಸ್ಥಳೀಯರು ತುಂಗಾನಗರ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next