Advertisement

ದಾಭೋಲ್ಕರ್‌ ಪ್ರಕರಣ: ಆರೋಪಿ ಪರ ವಕೀಲ ಸೆರೆ!

12:38 AM May 26, 2019 | Team Udayavani |

ಪುಣೆ: ಮಹಾರಾಷ್ಟ್ರದ ವಿಚಾರವಾದಿ ದಾಭೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪರ ವಕೀಲಿಕೆ ವಹಿಸಿದ್ದ ಅಡ್ವೊಕೇಟ್‌ ಸಂಜೀವ್‌ ಪುನಾಲೇಕರ್‌ ಅವರನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬಂಧಿಸಿದೆ.

Advertisement

ದಾಭೋಲ್ಕರ್‌ ಹತ್ಯೆ ಆರೋಪಿಗಳಿಗೂ ವಕೀಲ ಸಂಜೀವ್‌ ಅವರಿಗೂ ಮೊದಲೇ ಪರಿಚಯವಿರುವ ವಿಚಾರ ತನಿಖೆಯ ವೇಳೆ ತಿಳಿದುಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಸಂಜೀವ್‌ ಜತೆಗೆ, ಸನಾತನ ಸಂಸ್ಥೆಯ ಸದಸ್ಯನೆಂದು ಗುರುತಿಸಲಾಗಿರುವ ವಿಕ್ರಮ್‌ ಭಾವೆ ಎಂಬಾತನನ್ನೂ ಬಂಧಿಸಲಾಗಿದ್ದು ಈ ಇಬ್ಬರನ್ನು ರವಿವಾರ ಪುಣೆಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next