Advertisement

ಕಡಲ ತಡಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಡಿ.ಕೆ. ಸುರೇಶ್‌

10:01 AM Dec 26, 2019 | Team Udayavani |

ಕೋಟೇಶ್ವರ: ಲೋಕಸಭಾ ಸದಸ್ಯ ಕಾಂಗ್ರೆಸ್‌ ಮುಖಂಡ ಡಿ.ಕೆ. ಸುರೇಶ ಅವರು ಕೋಟೇಶ್ವರದ ರೆಸಾರ್ಟ್‌ ಒಂದರಲ್ಲಿ ಸದ್ದು ಗದ್ದಲ ಇಲ್ಲದೆ ಸರಳ ರೀತಿಯಲ್ಲಿ
ಡಿ. 20 ರಂದು ಹುಟ್ಟು ಹಬ್ಬ ಆಚರಿಸಿದರು. ಇದೇ ಸಂದರ್ಭದಲ್ಲಿ ಡಿ. ಕೆ. ಸುರೇಶ ಅವರನ್ನು ಹುಟ್ಟುಹಬ್ಬದ ಸಲುವಾಗಿ ಸಮ್ಮಾನಿಸಲಾಯಿತು.

Advertisement

ಇದೇ ಸಂಧರ್ಭದಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಬೀಜಾಡಿ ಅಶೋಕ್‌ ಪೂಜಾರಿ ಅವರ ಮನೆಯಲ್ಲಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ವಿಚಾರ ವಿನಿಮಯ ನಡೆಸಿದರು. ಅಲ್ಲದೆ ಈ ಭಾಗದಲ್ಲಿ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಬಗ್ಗೆ ಚರ್ಚಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌ ಕುಂದರ್‌, ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಶರತ್‌ ಹೆಗ್ಡೆ, ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಮೇಶ್‌ ಶೆಟ್ಟಿ ವಕ್ವಾಡಿ ಮತ್ತು ಅಭಿಷೇಕ್‌ ಪೂಜಾರಿ , ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ, ಮುಖಂಡರಾದ ಅಣ್ಣಯ್ಯ ಪುತ್ರನ್‌, ಶೇಖರ ಕಾಂಚನ್‌, ಕೋಡಿ ಸುನಿಲ್‌ ಪೂಜಾರಿ, ಬೀಜಾಡಿ ಗ್ರಾ. ಪಂ. ಸದಸ್ಯರಾದ ಶೇಖರ ಚಾತ್ರಬೆಟ್ಟು, ವೆಂಕಟೇಶ ಬೀಜಾಡಿ, ಯುವ ಮುಖಂಡ ಸುರೇಶ ಚಾತ್ರಬೆಟ್ಟು ಅಲ್ಲದೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next