Advertisement

ಗಟ್ಟಿ ಚರ್ಮದ ಸರ್ಕಾರ, ಸಾಮಾನ್ಯ ಜ್ಞಾನ ಇರೋರು ಹೀಗೆ ಮಾಡಲ್ಲ: ಡಿಕೆಶಿ ವಾಗ್ದಾಳಿ

01:50 PM Mar 14, 2021 | Team Udayavani |

ಶಿವಮೊಗ್ಗ: ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಆಯೋಜಿಸಿದ್ದ ಜನಾಕ್ರೋಶ ಸಮಾವೇಶ ಯಶಸ್ವಿಯಾಗಿದೆ‌. ಜಿಲ್ಲೆಯ ಜನರು ಉತ್ತಮ ಸಹಕಾರ ನೀಡಿದ್ದಾರೆ. ಉತ್ಸಾಹದಿಂದ ನೊಂದವರು ಭಾಗಿಯಾಗಿದ್ದಾರೆ. ರಾಜ್ಯದ ಯಾವುದೇ ಕಾರ್ಯಕರ್ತರಿಗೂ ಅಧಿಕಾರ ಬಳಸಿ ಕಿರುಕುಳ ನೀಡಬಾರದು ಎಂಬುದು ನಮ್ಮ ಉದ್ದೇಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಬಿಜೆಪಿಯ ಶಕ್ತಿ ಕೇಂದ್ರ ಎನ್ನವುದು ನಮಗೆ ಗೊತ್ತಿದೆ. ಅಂತಗದರಲ್ಲೂ ಪರಿವರ್ತನೆಯಾಗಿ ಜನರು, ವರ್ತಕರು, ಮಹಿಳೆಯರು ಎಲ್ಲರೂ ಬಂದಿದ್ದರು. ಇದು ರಾಜ್ಯದಲ್ಲಿ ಜನರು ಪರವರ್ತನೆ ಅಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಇದನ್ನೂ ಓದಿ:ಲಾಕ್ ಡೌನ್ ಆಗಬಾರದು ಅಂದ್ರೆ ಸರ್ಕಾರದ ಜೊತೆ ಸಹಕರಿಸಿ : ಸಿಎಂ

ಶಾಸಕ ಸಂಗಮೇಶ್ ಪುತ್ರನ ಬಂಧನ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಬಹಳ ಗಟ್ಟಿ ಚರ್ಮದ್ದು, ಸಾಮಾನ್ಯ ಜ್ಞಾನ ಇರೋರು ಹೀಗೆ ಮಾಡುವುದಿಲ್ಲ. ಘಟನೆ ನಡೆದಾಕ್ಷಣ ಕೊಲೆ ಪ್ರಕರಣ ದಾಖಲಿಸಿದ್ದಾರೆ. ರಾಜಕೀಯಕ್ಕಾಗಿ ಹೀಗೆ ಮಾಡಿದ್ದಾರೆ. ಸದನದಲ್ಲಿ ಕೂಡ ನೊಂದವರಿಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ಹಾಗೆಂದು ಸಂಗಮೇಶ್ ಶರ್ಟ್ ಬಿಚ್ಚಿದ್ದು ಸರಿ ಎನ್ನುವುದಿಲ್ಲ, ಅವರು ನೋವನ್ನು ವ್ಯಕ್ತಪಡಿಸಲು ಹೋದರಷ್ಟೇ‌. ಆದರೆ ತಕ್ಷಣವೇ ಆತನನ್ನು ಕರೆದು ಸಸ್ಪೆಂಡ್ ಮಾಡಿಸಿದ್ದಾರೆ. ಈ ಹಂತಕ್ಕೆ ಯಾರು ಹೋಗಬಾರದು ಎಂದು ಡಿಕೆಶಿ ಹೇಳಿದರು.

ಅಧಿವೇಶನದಲ್ಲೂ ಕೂಡ ಈ ಬಗ್ಗೆ ಹೋರಾಟ ಮಾಡುತ್ತೇವೆ. ಅನೇಕ ವಿಚಾರಗಳಿದ್ದು, ಚರ್ಚಿಸುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next