Advertisement
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರನ್ನು ಹೊಗಳಿರುವ ಬಗ್ಗೆ ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೋದಿ ಅವರ ಬಗ್ಗೆ ಗೌರವವಿದೆ. ಆದರೆ, ಯಡಿಯೂರಪ್ಪನವರಿಗೆ ಕೊಟ್ಟ ನೋವು, ಕಣ್ಣೀರು ಮರೆಯಲು ಸಾಧ್ಯವೇ?
Related Articles
Advertisement
“ಲಿಪ್ಸ್ ಸಿಂಪಥಿ’ ಬೇಡ: ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂಬ ಪ್ರಧಾನಿ ಮೋದಿ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ವೀರೇಂದ್ರ ಪಾಟೀಲರಿಗೆ ಆರೋಗ್ಯ ಸರಿಯಾಗಿರಲಿಲ್ಲ. ಆಗಿನ ಪರಿಸ್ಥಿತಿ ನೋಡಿಕೊಂಡು ರಾಜೀವ್ಗಾಂಧಿ ಅವರು ತೀರ್ಮಾನ ಕೈಗೊಂಡರು. ಅಂದಿನ ವಿದ್ಯಮಾನಗಳಿಗೆ ನಾನೇ ಸಾಕ್ಷಿ. ನಿಜಲಿಂಗಪ್ಪ, ವೀರೇಂದ್ರ ಪಾಟೀಲರ ಬಗ್ಗೆ ಮಾತನಾಡುವ ಮೋದಿಗೆ ರಾಜಕಾರಣ ಏನು ಗೊತ್ತು? ಈಗ ಅವರ ಬಗ್ಗೆ “ಲಿಪ್ ಸಿಂಪಥಿ” ಬೇಡ ಎಂದು ತಾಕೀತು ಮಾಡಿದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ನಿಜಲಿಂಗಪ್ಪ ಅವರನ್ನು ಸೋನಿಯಾಗಾಂಧಿ ಭೇಟಿಯಾಗಿದ್ದರು. ಅವರ ಅಳಿಯನಿಗೆ ರಾಜ್ಯಸಭಾ ಸದಸ್ಯತ್ವ, ಕೇಂದ್ರದಲ್ಲಿ ಸಚಿವ ಸ್ಥಾನ, ಆ ನಂತರ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಲಾಯಿತು, ಇವೆಲ್ಲಾ ಅವರಿಗೆ ಗೊತ್ತಿಲ್ಲವೇ ಎಂದು ಕಿಡಿ ಕಾರಿದರು.