Advertisement

ಕನ್ನಡ ಚಿತ್ರದ ಶೂಟಿಂಗ್‌ ವೇಳೆ ಸ್ಫೋಟ: ಇಬ್ಬರು ಕಲಾವಿದರ ದುರ್ಮರಣ

10:00 AM Mar 30, 2019 | Vishnu Das |

ಬೆಂಗಳೂರು : ರಣಂ ಕನ್ನಡ ಚಿತ್ರದ ಶೂಟಿಂಗ್‌ ವೇಳೆ ಅವಘಡವೊಂದು ನಡೆದಿದ್ದು, ಇಬ್ಬರು ಕಲಾವಿದರು ದುರ್ಮರಣವನ್ನಪ್ಪಿದ್ದಾರೆ.

Advertisement

ಶುಕ್ರವಾರ ಬಾಗಲೂರು ಬಳಿ ಶೂಟಿಂಗ್‌ ನಡೆಯುತ್ತಿದ್ದ ವೇಳೆ ಸಿಲಿಂಡರ್‌ ಸ್ಫೋಟಗೊಂಡಿದೆ ಎನ್ನಲಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಚಿರಂಜೀವಿ ಸರ್ಜಾ ಅವರು ನಾಯಕನಾಗಿ ರಣಂ ಚಿತ್ರದಲ್ಲಿ ನಟಿಸುತ್ತಿದ್ದು, ವಿ.ಸಮುದ್ರಂ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಫೋಟಕ್ಕೆ ಕಾರಣವೇನು, ಸಾವನ್ನಪ್ಪಿರುವ ಕಲಾವಿದರ ಕುರಿತಾಗಿ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next