Advertisement

ಪ್ರಚಂಡ ತೌಕ್ತೆ : ಅಲೆಗಳ ಅಬ್ಬರಕ್ಕೆ ಸಮುದ್ರ ಸೇರಿದ ಸಸಿಹಿತ್ಲು ಬೀಚ್

05:28 PM May 15, 2021 | Team Udayavani |

ಹಳೆಯಂಗಡಿ :  ಕರಾವಳಿಯ ಎಲ್ಲೆಡೆ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು. ಕಡಲ ತೀರದ ಪ್ರದೇಶದಲ್ಲಿ ವಾಸಿಸುವ ಜನ ಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ.

Advertisement

ಅಂತಾರಾಷ್ಟ್ರೀಯವಾಗಿ ಬೆಳಕಿಗೆ ಬಂದಿದ್ದ ಸಸಿಹಿತ್ಲುವಿನ ಮುಂಡ ಬೀಚ್ ಶೇ.80 ಭಾಗ ಕಡಲಿಗೆ ಸೇರಿದ್ದು,  ಅಂಗಡಿ ಹಾಗೂ ಜೀವರಕ್ಷಕದಳದ ವಿಶ್ರಾಂತಿ ಕೊಠಡಿ ಸಮುದ್ರದ ಅಲೆಗಳ ರಭಸಕ್ಕೆ ಕುಸಿದು ಬಿದ್ದಿದೆ.

ಇದನ್ನೂ ಓದಿ : ಶಿವಮೊಗ್ಗ: ಮಳೆಗಾಲದ ಮುಂಚೆಯೇ ಗರಿಷ್ಠ ಮಟ್ಟಕ್ಕೆ ತಲುಪಿದ ಗಾಜನೂರು ಜಲಾಶಯ

ಬೀಚ್ ನ ರಸ್ತೆಗೆ ನೇರವಾಗಿ ಅಲೆ ಅಪ್ಪಳಿಸುತ್ತಿದ್ದು, ಗಾಳಿ ಮರಗಳು ಧರೆಗೆ ಉರುಳಿದೆ. ವಿದ್ಯುತ್ ಕಂಬಗಳು ಅಪಾಯದ ಅಂಚಿನಲ್ಲಿದೆ, ಪ್ರವಾಸಿಗರು ಕುಳಿತುಕೊಳ್ಳುವ ಬೆಂಚುಗಳು ಮತ್ತಿತರ ಸವಲತ್ತುಗಳು ಸಮುದ್ರಕ್ಕೆ ಮಡಿಲಿಗೆ ಸೇರಿದೆ. ಸಾರ್ವಜನಿಕ ಶೌಚಾಲಯ ಕಟ್ಟಡ ಮಾತ್ರ ಉಳಿದಿದೆ. ಅಪಾಯಕಾರಿ ಬೀಚ್ ನ ಪ್ರದೇಶಕ್ಕೆ ಸ್ಥಳೀಯರಾಗಲಿ ಅಥವ ಸಾರ್ವಜನಿಕರು ಪ್ರವೇಶಿಸಬಾರದೆಂದು ಗೇಟ್ ನ್ನು ಮುಚ್ಚಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next