Advertisement

ಉಳ್ಳಾಲ: ತೌಖ್ತೆ ಚಂಡಮಾರುತದ ಪ್ರಭಾವಕ್ಕೆ ಸಮುದ್ರ ಪಾಲಾದ ಹಿಂದೂ ರುದ್ರಭೂಮಿ

02:35 PM May 15, 2021 | Team Udayavani |

ಉಳ್ಳಾಲ: ತೌಖ್ತೆ ಚಂಡಮಾರುತದ ಪ್ರಭಾವಕ್ಕೆ ಉಳ್ಳಾಲ ಸೋಮೇಶ್ವರ ಸಮುದ್ರ ತೀರದಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಸೋಮೇಶ್ವರ ಬಳಿ ಹಿಂದೂ ರುದ್ರಭೂಮಿ ಸಮುದ್ರ ಪಾಲಾಗಿದೆ.

Advertisement

ಸಮುದ್ರದ ಅಲೆಗಳಿಂದ ಸಮುದ್ರದ ನೀರು ಸುಮಾರು 100 ಮೀಟರ್ ಒಳಗೆ ನುಗ್ಗಿ ಮನೆಗಳು ಜಲಾವೃತವಾಗಿದೆ.

ಸೋಮೇಶ್ವರ ರುದ್ರಪಾದ ಬಳಿ ಇರುವ ಹಿಂದೂ ರುದ್ರಭೂಮಿ ಶುಕ್ರವಾರದ ಅಲೆಗೆ ಸಿಲುಕಿ ತಡೆಗೋಡೆ  ಸಮುದ್ರ ಪಾಲಾಗಿತ್ತು. ಶನಿವಾರದ ಸಮುದ್ರದ ಅಲೆಗಳಿಗೆ ಸಂಪೋರ್ಣ ರುದ್ರಭೂಮಿಯೇ ಕುಸಿದು ಬಿದ್ದು ಭಾಗಸದ: ಸಮುದ್ರ ಪಾಲಾಗಿದೆ.

ಉಚ್ಚಿಲ ಬಟ್ಟಪ್ಪಾಡಿ ಬಳಿಯೂ ಮನೆಗಳು ಅಪಾಯದಲ್ಲಿದ್ದು ಬೃಹತ್ ಗಾತ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದೆ.

Advertisement

ಉಳ್ಳಾಲ ಮೊಗವೀರಪಟ್ಣ ಬಳಿ ಬೃಹತ್ ಗಾತ್ರದ ಅಲೆಗಳಿಂದ ಉಂಟಾದ ಸಮುದ್ರದ ನೀರು ಸುತ್ತಮುತ್ತಲಿನ ಮನೆಗಳಿಗೆ ನುಗ್ಗುತ್ತಿದ್ದೆ. ಉಳ್ಳಾಲದ ಕಿಲೇರಿಯಾನಗರ, ಮುಕ್ಜಚ್ಚೇರಿ ಬಳಿ ಮಸೀದಿಯೊಂದು ಅಪಾಯದ ಸ್ಥಿತಿಯಲ್ಲಿದೆ. ಕೋಟೆಪುರ , ಸೀಗ್ರೌಂಡ್ ಬಳಿ ಮನೆ ಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ. ಸೋಮೇಶ್ವರ ಉಚ್ಚಿಲ ಪ್ರದೇಶಕ್ಕೆ ಸಚಿವ ಅಂಗಾರ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next