Advertisement

BJP ತೊಲಗಿಸುವವರೆಗೆ ಸೈಕಲ್ ರ‍್ಯಾಲಿ ಮುಂದುವರಿಯುತ್ತದೆ: ಅಖಿಲೇಶ್ ಯಾದವ್

04:04 PM Oct 30, 2023 | Team Udayavani |

ಲಕ್ನೋ: ಉತ್ತರಪ್ರದೇಶದಲ್ಲಿ ಪ್ರಮುಖ ವಿಪಕ್ಷ ಸಮಾಜವಾದಿ ಪಕ್ಷದ  ಮುಂಚೂಣಿ ಸಂಘಟನೆಯಾದ ಸಮಾಜವಾದಿ ಲೋಹಿಯಾ ವಾಹಿನಿ ರಾಜ್ಯಾದ್ಯಂತ ನಡೆಸುತ್ತಿರುವ ಪಿಡಿಎ ಯಾತ್ರಾ ಬೈಸಿಕಲ್ ರ‍್ಯಾಲಿ  ಸೋಮವಾರ ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸಾಗಿತು.

Advertisement

ಯಾತ್ರೆಯಲ್ಲಿ ಕಾರ್ಯಕರ್ತರೊಂದಿಗೆ ಸೈಕಲ್ ತುಳಿದ ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮಾತನಾಡಿ”ಈ ಯಾತ್ರೆಯು ಬಿಜೆಪಿಯನ್ನು ತೊಡೆದುಹಾಕುವ ವರೆಗೆ ಮುಂದುವರಿಯುತ್ತದೆ. ನಾವು ಜನರ ನಡುವೆ ಹೋಗುತ್ತೇವೆ, ಅವರನ್ನು ಸಂಪರ್ಕಿಸುತ್ತೇವೆ ಮತ್ತು ಜಾಗೃತಿ ಮೂಡಿಸುತ್ತೇವೆ. ನಾವು ಬಿಜೆಪಿಯನ್ನು ತೊಲಗಿಸುತ್ತೇವೆ” ಎಂದರು.

”ಈ ಯಾತ್ರೆ ಇಂದು ಲಕ್ನೋಗೆ ಬಂದಿದೆ.ಹಲವು ದಿನಗಳಿಂದ ಪಕ್ಷದ ಕಾರ್ಯಕರ್ತರು ತಮ್ಮ ಜಿಲ್ಲೆಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂಪರ್ಕ ಸಾಧಿಸುತ್ತಿದ್ದಾರೆ, ನಮಗೆ ಬೆಂಬಲ ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಗಸ್ಟ್ 9 ರಂದು ಪ್ರಯಾಗರಾಜ್‌ನಿಂದ ಆರಂಭವಾದ ‘ದೇಶ್ ಬಚಾವೋ, ಸಮಾಜವಾದಿ ಸೈಕಲ್ ಯಾತ್ರೆ’ ಯಾತ್ರೆಯ ಉದ್ದೇಶ ರಾಜ್ಯದ 75 ಜಿಲ್ಲೆಗಳ 403 ವಿಧಾನಸಭಾ ಕ್ಷೇತ್ರಗಳ ಜನರನ್ನು ತಲುಪುವ ಉದ್ದೇಶ ಹೊಂದಿದೆ. ರಾಜ್ಯದಲ್ಲಿ ಜಾತಿ ಗಣತಿಗೆ ಬೇಡಿಕೆಯು ಯಾತ್ರೆಯ ಪ್ರಮುಖ ಗಮನವನ್ನು ಹೊಂದಿದೆ, ಯಾತ್ರೆಯು ಇಲ್ಲಿಯವರೆಗೆ 25 ಜಿಲ್ಲೆಗಳನ್ನು ಕ್ರಮಿಸಿದ್ದು, ಬುಂದೇಲ್‌ಖಂಡ್ ಪ್ರದೇಶ ಮತ್ತು ಪೂರ್ವ ಯುಪಿ ಜಿಲ್ಲೆಗಳಲ್ಲಿ ಸುಮಾರು 5,000 ಕಿಮೀಗಳನ್ನು ಸೈಕಲ್‌ನಲ್ಲಿ ಸಂಚರಿಸಿದೆ. ಎಸ್‌ಪಿಯ ಚುನಾವಣ ಚಿಹ್ನೆ ಕೂಡ ಸೈಕಲ್ ಎಂಬುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next