Advertisement

Fraud Case: ಅನಾಮಧೇಯ ಲಿಂಕ್‌, ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ಖೋತ

09:23 PM Jun 02, 2024 | Team Udayavani |

ಉಡುಪಿ: ಎಪಿಕೆ ಫೈಲ್‌ ಕ್ಲಿಕ್‌ ಮಾಡಿದ ಹಿರಿಯ ನಾಗರಿಕರೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

Advertisement

ಕಾರ್ಕಳದ ಶ್ರೀನಿವಾಸ್‌ ರಾವ್‌ ಕೆ.ಪಿ. ಅವರ ವಾಟ್ಸಾಪ್‌ ಸಂಖ್ಯೆಗೆ ಮೇ 4ರಂದು ಎಸ್‌ಬಿಐ ಬ್ಯಾಂಕ್‌ ಎಂದು ನಮೂದಿಸಿ ಎಪಿಕೆ ಫೈಲ್‌ ಬಂದಿತ್ತು. ಮೇ 18ರಂದು ಕೆನರಾ ಬ್ಯಾಂಕ್‌ ಹೆಸರಿನಿಂದ ಎಪಿಕೆ ಫೈಲ್‌ ಬಂದಿದ್ದು ಮೇ 24ರಂದು ರಾಧಾ ಎಂಬ ಹೆಸರಿನ ವಾಟ್ಸಾಪ್‌ ಗ್ರೂಪ್‌ನಲ್ಲಿ ಎಸ್‌ಬಿಐ ರಿವಾರ್ಡ್‌ ಎಂಬ ಎಪಿಕೆ ಫೈಲ್‌ ಬಂದಿತ್ತು. ಮೇ 26ರಂದು ಅನಾಮಧೇಯ ಮೊಬೈಲ್‌ ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಸಿಮ್‌ ಡಿಆ್ಯಕ್ಟಿವ್‌ ಆಗಿದೆ ಎಂದು ಹೇಳಿದ್ದು, ಅದೇ ದಿನ ಮೊಬೈಲ್‌ ಸಿಮ್‌ ಕಾರ್ಯಾಚರಣೆ ಸ್ಥಗಿತವಾಗಿದೆ. ಬಳಿಕ ಅವರು ಮೇ 30ರಂದು ಹೊಸ ಸಿಮ್‌ ಪಡೆದು ಆ್ಯಕ್ಟಿವೇಶನ್‌ ಮಾಡಿದ್ದು, ಮೇ 31ರಂದು ಅವರ ಖಾತೆಗೆ ಲಿಂಕ್‌ ಇದ್ದ ತಾಯಿ ಪ್ರೇಮಾ ವಿ. ರಾವ್‌ ಹೊಂದಿರುವ ಕೆನರಾ ಬ್ಯಾಂಕ್‌ ಎಸ್‌.ಬಿ. ಖಾತೆಯಿಂದ ಯಾರೋ ಅಪರಿಚಿತ ವ್ಯಕ್ತಿಗಳು ಮೇ 27ರಿಂದ 31ರ ವರೆಗೆ ಹಂತ ಹಂತವಾಗಿ ಒಟ್ಟು 1,01,288 ರೂ.ಗಳನ್ನು ಎಗರಿಸಿದ್ದಾರೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next