Advertisement

ಸೂಜಿ ಪ್ರಕರಣ: ಮೇಲ್ಮನವಿ ಇಲ್ಲ?

07:15 AM Apr 15, 2018 | Team Udayavani |

ಹೊಸದಿಲ್ಲಿ: ಕಾಮನ್‌ವೆಲ್ತ್‌ನಲ್ಲಿ ಪಾಲ್ಗೊಂಡ ಭಾರತೀಯ ಕ್ರೀಡಾಪಟುಗಳಿಬ್ಬರು ತಂಗಿದ್ದ ಕೊಠಡಿಯ ಪಕ್ಕದಲ್ಲಿ ಸೂಜಿ ಸಿಕ್ಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಇಬ್ಬರು ಆ್ಯತ್ಲೀಟ್‌ಗಳು ಅಮಾನತುಗೊಂಡಿದ್ದಾರೆ. 

Advertisement

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತ ಮೇಲ್ಮನವಿ ಸಲ್ಲಿಸಿದ್ದಾಗಿ ಹೇಳಿತ್ತು. ಆದರೆ ಇದುವರೆಗೆ ಭಾರತ ಮೇಲ್ಮನವಿ ಸಲ್ಲಿಸಿಲ್ಲ ಎಂದು ಕಾಮನ್‌ವೆಲ್ತ್‌ ಗೇಮ್ಸ್‌ ಒಕ್ಕೂಟ (ಸಿಜಿಎಫ್) ಸ್ಪಷ್ಟನೆ ನೀಡಿದೆ.

ರೇಸ್‌ ವಾಕರ್‌ ಕೆ.ಟಿ.ಇರ್ಫಾನ್‌ ಹಾಗೂ ಟ್ರಿಪಲ್‌ ಜಂಪ್‌ ಸ್ಪರ್ಧಿ ವಿ. ರಾಕೇಶ್‌ ಬಾಬು ಅವರನ್ನು ಕ್ರೀಡಾ ಗ್ರಾಮದಿಂದ ಸಂಘಟಕರು ಹೊರಹಾಕಿದ್ದರು. ಇದನ್ನು ಭಾರತ ವಿರೋಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next