Advertisement

C V Ananda Bose; ರಾಜ್ಯಪಾಲರಿಗೆ ಕಡಿವಾಣ: ಆಯೋಗಕ್ಕೆ ಟಿಎಂಸಿ ನಾಯಕರ ಆಗ್ರಹ

12:47 AM Mar 23, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರು ಲೋಕಸಭೆ ಚುನಾವಣೆ ಪ್ರಕ್ರಿಯೆಗಳಲ್ಲಿ ಕಾನೂನು ಬಾಹಿರವಾಗಿ ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಿ ಚುನಾವಣ ಆಯೋಗಕ್ಕೆ ಟಿಎಂಸಿ ಶುಕ್ರವಾರ ದೂರು ನೀಡಿದೆ. ಅಲ್ಲದೆ ಮತದಾರರ ಕುಂದುಕೊರತೆಗಳನ್ನು ಆಲಿಸಲು ಹಾಗೂ ಚುನಾವಣೆ ಸಂದರ್ಭದಲ್ಲಿ ಅವರೊಂದಿಗೆ ನೇರ ಸಂಪರ್ಕದಲ್ಲಿರಲು ವಿಶೇಷ ವೆಬ್‌ಸೈಟ್‌ ಅನ್ನು ರಾಜಭವನ ಪ್ರಾರಂಭಿಸಿದೆ.

Advertisement

ಈ ಮೂಲಕ ಚುನಾವಣೆ ಆಯೋಗದ ಅಧಿಕಾರವನ್ನೂ ಕಸಿದುಕೊಳ್ಳಲು ರಾಜಭವನ ಮುಂದಾಗಿದೆ ಎಂದು ಪಕ್ಷ ನಾಯಕರು ಆರೋಪಿಸಿªದಾರೆ. ಸಿ.ವಿ.ಆನಂದ ಬೋಸ್‌ ಅವರ ಈ ಕ್ರಮಗಳಿಗೆ ತಡೆ ನೀಡುವಂತೆ ಪಕ್ಷ ಮನವಿ ಮಾಡಿದೆ. ಜತೆಗೆ ಲೋಕಸಭೆ ಚುನಾವಣೆ ಪ್ರಕ್ರಿಯೆಗಳಲ್ಲಿ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರು ಮಧ್ಯಪ್ರದೇಶಿಸ ದಂತೆ ಚುನಾವಣ ಆಯೋಗ ಖಾತರಿ ಪಡಿಸಬೇಕು ಎಂದು ಅದು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next