Advertisement

ಸೀತಾಫ‌ಲ ರೋಗಗಳಿಗೆ ರಾಮಬಾಣ

08:04 PM Aug 27, 2019 | mahesh |

ಇಂಗ್ಲಿಷ್‌ನಲ್ಲಿ ಕಸ್ಟರ್ಡ್‌ ಆ್ಯಪಲ್‌ ಎನ್ನುವ ಸೀತಾಫ‌ಲ, ಸೇಬುಹಣ್ಣಿನಷ್ಟೇ ಪೌಷ್ಟಿಕ ಅಂಶಗಳನ್ನು ಹೊಂದಿದೆ. ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ ಎಂಬ ಮಾತಿನಂತೆ, ಸೀತಾಫ‌ಲ ತಿನ್ನುವುದರಿಂದಲೂ ಆರೋಗ್ಯ ವೃದ್ಧಿಸುತ್ತದೆ. ಕೇವಲ ಹಣ್ಣು ಮಾತ್ರವಲ್ಲ, ಇದರ ಎಲೆ, ಬೇರು, ಕಾಂಡದಿಂದಲೂ ಅನೇಕ ಉಪಯೋಗಗಳಿವೆ.

Advertisement

– ಸೀತಾಫ‌ಲದಲ್ಲಿ ವಿಟಮಿನ್‌ ಎ, ಸಿ, ಕಬ್ಬಿಣಾಂಶ, ನಾರಿನ ಅಂಶ, ಮೆಗ್ನಿಷಿಯಂನಂಥ ಪೋಷಕಾಂಶಗಳು ಹೇರಳವಾಗಿವೆ.

– ವಿಟಮಿನ್‌ ಎ ಅಧಿಕವಾಗಿರುವುದರಿಂದ ದೃಷ್ಟಿ ಸಮಸ್ಯೆಗಳನ್ನು ದೂರವಿಡಬಹುದು.

– ಪ್ರತಿನಿತ್ಯ ಬೆಳಗ್ಗೆ ಒಂದು ಚಮಚ ಸೀತಾಫ‌ಲದ ಎಲೆಯ ರಸ ಕುಡಿದರೆ, ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದಂತೆ.

– ಸೀತಾಫ‌ಲದ ಎಲೆಯನ್ನು ನೀರಿನಲ್ಲಿ ಹಾಕಿ ಕಷಾಯ ಮಾಡಿ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.

Advertisement

– ಬಾಣಂತಿಯರು ಈ ಹಣ್ಣನ್ನು ಸೇವಿಸಿದರೆ ನಿಶ್ಶಕ್ತಿ ಕಾಡುವುದಿಲ್ಲ.

– ಈ ಹಣ್ಣಿನಲ್ಲಿರುವ ಕ್ಯಾಲ್ಸಿಯಂ ಅಂಶದಿಂದ ಬೆಳೆಯುವ ಮಕ್ಕಳ ಮೂಳೆ ಗಟ್ಟಿಯಾಗುತ್ತದೆ.

-ಸೀತಾಫ‌ಲವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

– ಗರ್ಭಿಣಿಯರ ಆರೋಗ್ಯಕ್ಕೆ ಮತ್ತು ಹೆರಿಗೆಯ ನಂತರ ಎದೆಹಾಲು ಉತ್ಪನ್ನ ಹೆಚ್ಚಳಕ್ಕೆ ಸೀತಾಫ‌ಲ ಸಹಕಾರಿ.

– ಸೀತಾಫ‌ಲದಲ್ಲಿ ವಿಟಮಿನ್‌ ಬಿ6 ಸಮೃದ್ಧವಾಗಿದ್ದು, ಶ್ವಾಸ ಸಂಬಂಧಿ ರೋಗಗಳನ್ನು ನಿಯಂತ್ರಿಸುತ್ತದೆ.

-ರಕ್ತಶುದ್ಧಿಯಲ್ಲಿ ಸಹಾಯ ಮಾಡುತ್ತದೆ.
– ಸೀತಾಫ‌ಲದ ಎಲೆಗಳನ್ನು ನುಣ್ಣಗೆ ಅರೆದು ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ.
-ದಿನವೂ ಬೆಳಗ್ಗೆ ಸೀತಾಫ‌ಲವನ್ನು ಸೇವಿಸಿದರೆ ನರಗಳ ಬಲಹೀನತೆ ನಿವಾರಣೆಯಾಗುತ್ತದೆ.
– ಗ್ಯಾಸ್‌, ಆ್ಯಸಿಡಿಟಿ, ಅಜೀರ್ಣ, ಮಲಬದ್ದತೆಯಂಥ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣ.

-ಹರ್ಷಿತಾ ಕುಲಾಲ್‌ ಕಾವು

Advertisement

Udayavani is now on Telegram. Click here to join our channel and stay updated with the latest news.

Next