Advertisement
ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ನೀತಿ ನಿಯಮ ಇಲ್ಲದೇ ಸಮಾಜ-ನಾಡು ಬೆಳೆಯದು. ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನ. ಪೂರ್ವಜರ ಮೌಲ್ಯಾಧಾರಿತ ಚಿಂತನಗಳು ಬಾಳಿಗೆ ಆಶಾದೀಪ ಎಂದು ಹೇಳಿದರು.
ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು ಎಂದರು. ಸುಳ್ಳಿಗೆ ಹಲವು ದಾರಿ. ಆದರೆ ಸತ್ಯಕ್ಕೆ, ಧರ್ಮಕ್ಕೆ ಒಂದೇ ದಾರಿ. ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವ ಬದುಕಿನ ಉತ್ಕರ್ಷತೆಗೆ ತತ್ವತ್ರಯಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಮಾನವ ಜೀವನ ಮೌಲ್ಯಗಳು ಅಂತ್ಯಗೊಂಡರೆ ಅದರೊಂದಿಗೆ ಮಾನವೀಯತೆ ಅಂತ್ಯವಾಗುತ್ತದೆಂದು ಎಚ್ಚರಿಸಿದರು.
Related Articles
ಸಾಮಾಜಿಕ ಹಿತ ಮುಖ್ಯ. ಸತ್ಯ ಶಾಂತಿ ಎಲ್ಲರ ಬಾಳಿಗೆ ಅಗತ್ಯವೆಂದರು.
Advertisement
ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ಭಾರತ ಧರ್ಮಭೂಮಿ. ಸರ್ವ ಜನಾಂಗದ ಶಾಂತಿಯ ತೋಟ. ಪ್ರತಿಯೊಬ್ಬರಲ್ಲಿ ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಬೆಳೆಸಬೇಕು. ಈ ದೆಸೆಯಲ್ಲಿ ರಂಭಾಪುರಿ ಪೀಠಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದರು. ಮಕ್ಕಳತಜ್ಞ ಡಾ| ಧನಂಜಯ ಸರ್ಜಿ, ಮಹೇಶ್ವರಪ್ಪ, ಚಂದನ ಪಟೇಲ್, ನಿಂಬೆಗೊಂದಿ ಷಣ್ಮುಖಪ್ಪ, ನಂಜುಂಡಸ್ವಾಮಿ, ಡಿ.ವಿ. ಬಸವಲಿಂಗಪ್ಪ ಇದ್ದರು. ವಿಶಾಲಾಕ್ಷಿ ಮಂಜುನಾಥ ಅವರಿಂದ ಸಂಗೀತ ಜರುಗಿತು. ಜ್ಯೋತಿಪ್ರಕಾಶ ಸ್ವಾಗತಿಸಿದರು. ಎಸ್. ಪಿ. ದಿನೇಶ ನಿರೂಪಿಸಿದರು. ಎಚ್. ಜಿ. ಚಂದ್ರಶೇಖರ ವಂದಿಸಿದರು.