Advertisement
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಈ ಯೋಜನೆಯಡಿ ಪರಿಶಿಷ್ಟ ಜಾತಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಒಡೆಯರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಘಟಕ ವೆಚ್ಚ ಮಿತಿಯೊಳಗೆ ಕನಿಷ್ಠ 2 ಎಕರೆ ಖುಷ್ಕಿ 1 ಎಕರೆ ನೀರಾವರಿ ಎಂದು ಖರೀಧಿಸಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರ ಹೆಸರಿನಲ್ಲಿ ನೊಂದಾಯಿಸಲಾಗಿದೆ. ಈ ಯೋಜನೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ ಅರ್ಹರಿಗೆ ಭೂಮಿಯ ಮಂಜೂರಾತಿಯ ಅಧಿಕಾರ ಜಿಲ್ಲಾಧಿಕಾರಿಗೆ ವಹಿಸಲಾಗಿತ್ತು.
Related Articles
Advertisement
ಈ ಪ್ರಕರಣದಲ್ಲಿ ಗೋಲಮಾಲ್ ನಡೆದಿದ್ದಾರೆ ಎಂಬುದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ನಜೀರಸಾಬ್ ಅವರ ಆರೋಪ.
ಸಾಲದ ಹೊರೆ:
ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗೆ ನೀರಾವರಿ ಆಗಿದ್ದಲ್ಲಿ ಘಟಕ ವೆಚ್ಚ15 ಲಕ್ಷ ಇದ್ದು ಇದರಲ್ಲಿ ತಲಾ ಶೇ.50 ರಾಜ್ಯ ಸರ್ಕಾರ ಹಾಗೂ ಫಲಾನುಭವಿ ಪಾವತಿಸಬೇಕಿದೆ. ಅರ್ಹ ಫಲಾನುಭವಿಗೆ ಶೇ.50 ರಷ್ಟು ಪಾವತಿಸಲು 10 ವರ್ಷ ಶೇ.6 ಆಧಾರದಲ್ಲಿ ಮರಳಿ ಪಾವತಿಸಬೇಕು. ಈ ಪ್ರಕರಣದಲ್ಲಿ ಈ ಭೂಮಿಯಲ್ಲಿ ಏನು ಬೆಳೆಯಲು ಸಾದ್ಯ? ಫಲಾನುಭವಿಗೆ ಜಮೀನು ಸಿಕ್ಕ ಖುಷಿ ಈಗಿಲ್ಲ ಶೇ.6 ಮೊತ್ತ ವಾಪಸ್ಸು ಕಟ್ಟ ಬೇಕಿದೆ. ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಇದರ ಬಗ್ಗೆ ವ್ಯಾಪಕ ತನಿಖೆಯಿಂದ ಈ ರೈತರಿಗೆ ನ್ಯಾಯ ಕಲ್ಪಿಸಬೇಕೆಂದು ನಜೀರಸಾಬ್ ಮೂಲಿಮನಿ ಒತ್ತಾಯಿಸಿದ್ದಾರೆ.
-ಮಂಜುನಾಥ ಮಹಾಲಿಂಗಪುರ