ಕನಕಪುರ ತಾಲೂಕು ಸೂರನಹಳ್ಳಿ ಗ್ರಾಮದ ಎಸ್.ಪಿ. ಸುನಿಲ್ ಗೌಡ (28), ಎಸ್.ಜಿ. ಶಶಿಕುಮಾರ್ (30) ಮೃತರು. ಮುನಿರಾಜು, ಎಸ್.ಎನ್. ಜಯಚಂದ್ರ, ಎಸ್.ಆರ್. ಮಂಜುನಾಥ್ ತೀವ್ರ ಗಾಯಗೊಂಡಿ ದ್ದಾರೆ. ಶಾಸಕ ಸಿ.ಟಿ. ರವಿ ಅಪಾಯ ದಿಂದ ಪಾರಾಗಿದ್ದಾರೆ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸಿ.ಟಿ. ರವಿ, ಉರ್ಕೆಹಳ್ಳಿ ರಾ.ಹೆ. 75ರ ಬಳಿ ನಡೆದದ್ದು ದುರದೃಷ್ಟಕರ ಘಟನೆ. ಈ ಬಗ್ಗೆ ನನಗೂ ನೋವಿದೆ. ಪಕ್ಷದ ಕಾರ್ಯಕ್ರಮ ಇದ್ದ ಕಾರಣ ನಾನು ಚೆನ್ನೈಗೆ ಹೋಗಲು ಮಂಗಳವಾರ 11.30ಕ್ಕೆ ಚಿಕ್ಕಮಗಳೂರಿನಿಂದ ಹೊರಟಿದ್ದೆ. ನಾನು ನಿದ್ರಿಸು ತ್ತಿದ್ದೆ. ಚಾಲಕ ಆಕಾಶ್ ಕಾರು ಚಲಾಯಿಸುತ್ತಿದ್ದ. ಕಾರು ಉರುಳಿ ಬಿದ್ದು ಏರ್ಬ್ಯಾಗ್ ಓಪನ್ ಆಗಿ ಎದೆ ಹಾಗೂ ಮೈ ಕೈ ತರಚಿ ನೋವು ಆದಾಗ ಎಚ್ಚರಗೊಂಡು ನೋಡಿದಾಗ ಇಬ್ಬರ ಶವ ಬಿದ್ದಿತ್ತು. ಕೂಡಲೇ ಪೊಲೀಸರಿಗೆ, ಆ್ಯಂಬುಲೆನ್ಸ್ಗೆ ಫೋನ್ ಮಾಡಿ ಶವ ಹಾಗೂ ಗಾಯಾಳು ಗಳನ್ನು ಆಸ್ಪತ್ರೆಗೆ ಕಳಿಸಿಕೊಟ್ಟು ಪೊಲೀಸರ ಅನುಮತಿ ಪಡೆದು ಬೆಂಗಳೂರಿಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದೇನೆ. ಚೆನ್ನೈ ಕಾರ್ಯಕ್ರಮ ರದ್ದುಪಡಿಸಿದ್ದೇನೆ. ಮೃತರು, ಗಾಯಾಳುಗಳ ಮನೆಗಳಿಗೆ ಹೋಗಿ ಅವರ ಸಂಬಂಧಿಕರಿಗೆ ಸಾಂತ್ವನ ಹೇಳುತ್ತೇನೆ ಎಂದು ಹೇಳಿದರು. ಸಿ.ಟಿ. ರವಿ ಕಾಫೀನೇ ಕುಡಿಯಲ್ಲ, ಮದ್ಯ ಸೇವಿಸ್ತಾರಾ?
ಶಾಸಕ ಸಿ.ಟಿ. ರವಿ ಕಳೆದ 18 ವರ್ಷಗಳಿಂದ ಕಾಫಿ, ಟೀ, ಹಾಲನ್ನೇ ಕುಡಿಯುವುದಿಲ್ಲ. ಇನ್ನು ಮದ್ಯ ಸೇವನೆ ಮಾಡುತ್ತಾರೆಯೇ? ಎಂದು ಶಾಸಕ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ಪ್ರಶ್ನಿಸಿದ್ದಾರೆ. ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವುದು ತೀವ್ರ ನೋವುಂಟು ಮಾಡಿದೆ. ಈ ಅಪಘಾತ ಆಕಸ್ಮಿಕ. ಶೀಘ್ರದಲ್ಲಿಯೇ ಮೃತಪಟ್ಟ ಕುಟುಂಬಗಳ ಮನೆಗೆ ತೆರಳಿ ಸಾಂತ್ವನ ಹೇಳುತ್ತೇವೆ. ಅವರಿಗೆ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
Related Articles
ಘಟನೆಯಿಂದ ಸಿಟ್ಟಿಗೆದ್ದ ಯುವಕರು ಸ್ಥಳದಲ್ಲೇ ಇದ್ದ ಶಾಸಕ ಸಿ.ಟಿ. ರವಿ ಅವ ರಿಗೆ ಘೇರಾವ್ ಹಾಕಿ ಧಿಕ್ಕಾರ ಕೂಗಿ ದರು. ಆಸ್ಪತ್ರೆ ಮುಂದೆಯೂ ಮೃತರ ಸಂಬಂಧಿಕರು ಪ್ರತಿ ಭಟನೆ ನಡೆ ಸಿ ದರು. ಮೃತ ಸಂಬಂಧಿ ಪ್ರಸಾದ್ ಗೌಡ ಮಾತ ನಾಡಿ, ಶಾಸಕರು ಸೌಜನ್ಯ ಕ್ಕಾದರೂ ಗಾಯಾಳು ಗಳ ಯೋಗಕ್ಷೇಮ ವಿಚಾರಿಸಬಹುದಿತ್ತು. ಆದರೆ ಘಟನೆ ಮುಚ್ಚಿ ಹಾಕಲು ಯತ್ನಿಸಿ ತೆರಳಿದರು ಎಂದು ಆರೋಪಿಸಿದ್ದಾರೆ.
Advertisement