Advertisement

ಸರ್ಕಾರ ಕೆಲಸ ಮಾಡಿಲ್ಲ ಎನ್ನುವ ಸಿದ್ದು ಚರ್ಚೆಗೆ ಬರಲಿ: ಸಿ.ಟಿ.ರವಿ

10:13 AM Jan 27, 2020 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದಾದರೆ ಮಾಜಿ ಸಿಎಂ ಸಿದ್ದರಾಮಯ್ಯ ಚರ್ಚೆಗೆ ಬರಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸವಾಲು ಹಾಕಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಐದು ವರ್ಷಗಳ ಸರಕಾರದಲ್ಲಿ ಏನೇನು ಅಭಿವೃದ್ಧಿ ಕೆಲಸ ಆಗಿದೆ. ಬಿಜೆಪಿ ಸರಕಾರ ಐದು ತಿಂಗಳುಗಳಲ್ಲಿ ಏನೇನು ಅಭಿವೃದ್ಧಿ ಕೆಲಸ ಮಾಡಿದೆ ಎಂಬುದರ ಚರ್ಚೆಗೆ ನಾವು ಸಿದ್ಧರಿದ್ದು, ಸಿದ್ದರಾಮಯ್ಯ ಚರ್ಚೆಗೆ ಬರಲಿ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸಂಘ ಪರಿವಾರದ ಯಾರಿಂದ ಜೀವ ಬೆದರಿಕೆ ಇದೆ ಎಂಬುದನ್ನು ಸ್ಪಷ್ಟಪಡಿಸಲಿ. ಇಂಥ ಹೇಳಿಕೆಯಿಂದ ಅವರು ಸಕ್ರಿಯವಾಗಬೇಕಿಲ್ಲ. ಅನೇಕ ಧನಾತ್ಮಕ ದಾರಿಗಳಿವೆ. ಸಂಘ ಪರಿವಾರದ ಹೆಸರು ದುರುಪಯೋಗ ಮಾಡಿಸಿಕೊಳ್ಳುವುದು ಫ್ಯಾಷನ್‌ ಆಗಿದೆ.

ನಿರ್ದಿಷ್ಟವಾಗಿ ಯಾರಿಂದ ಜೀವ ಬೆದರಿಕೆ ಇದೆ ಎಂದು ದೂರು ಕೊಟ್ಟರೆ ಪತ್ತೆ ಹಚ್ಚಲಾಗುವುದು ಎಂದು ಸಿ.ಟಿ.ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next