Advertisement

ನಮ್ಮದು ವಿರೋಚಿತ ಹೋರಾಟ, ಅಸಹಾಯಕತೆ ಶರಣಾಗತಿಯಲ್ಲ: ಸಿ.ಟಿ.ರವಿ

09:51 AM Feb 12, 2020 | sudhir |

ಚಿಕ್ಕಮಗಳೂರು: “ದೆಹಲಿ ಚುನಾವಣೆ ಫಲಿತಾಂಶ ಏನೇ ಇರಲಿ ಜನಾಭಿಪ್ರಾಯವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಸಚಿವ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅನೇಕ ಸೋಲು-ಗೆಲುವನ್ನು ಕಂಡಿದೆ. ಅದು ಸ್ವಾಭಾವಿಕ. ಜನ ಒಂದೊಂದು ಚುನಾವಣೆಗೆ ಒಂದೊಂದು ರೀತಿ ಫಲಿತಾಂಶ ನೀಡುತ್ತಾರೆ. ಈ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವದ ಮಹತ್ವ ಅರಿವಾಗಿದೆ. ನಮ್ಮದು ವಿರೋಚಿತ ಹೋರಾಟ, ಅಸಹಾಯಕತೆ ಶರಣಾಗತಿಯಲ್ಲ. ದೆಹಲಿ ಚುನಾವಣೆಯಲ್ಲಿ ಪಕ್ಷ ಕಡಿಮೆ ಫಲಿತಾಂಶ ಪಡೆದುಕೊಳ್ಳಲು ಕಾರಣವೇನು ಎಂಬುದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದರು.

ಮಾತೃಭಾಷೆಯಲ್ಲಿ ಶಿಕ್ಷಣ ಸಿಗಬೇಕು ಎಂಬ ಸರೋಜಿನಿ ಮಹರ್ಷಿ ವರದಿಯಲ್ಲಿದೆ. ಆದರೆ, ಮಕ್ಕಳು ಯಾವ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕೆಂಬುದು ಪೋಷಕರಿಗೆ ಬಿಟ್ಟಿದ್ದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದ್ದರಿಂದ ಸಾಹಿತಿಗಳು, ಚಿಂತಕರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವುದೋ ಅಥವಾ ಭಾಷೆ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಕ್ರಮ ಕೈಗೊಳ್ಳುವುದೋ ಎಂಬುದರ ಕುರಿತು ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next