Advertisement

Politics: ಡಿಕೆ‌ಶಿ ಕೇಡಿ ತರ ಆಡಬಾರದು.. ತಿರುಗೇಟು ನೀಡಿದ ಸಿಟಿ ರವಿ

01:43 PM Oct 18, 2023 | Team Udayavani |

ಚಿಕ್ಕಮಗಳೂರು: ಉಪಮುಖ್ಯಮಂತ್ರಿ ಡಿ.ಕೆ‌.ಶಿವ ಕುಮಾರ್ ಅವರು  ಕೇಡಿ ತರ ಆಡಬಾರದು. ಕೆಡಿಯ ರೀತಿ ನಡೆದು ಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.

Advertisement

ಸಿ.ಟಿ.ರವಿ ಲೂಟಿ ರವಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಡಿಯ ರೀತಿಯಲ್ಲಿ ನಡೆದುಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ಅವರು ಕೆಡಿ ರೀತಿ ನಡೆದುಕೊಳ್ಳುವುದು ಪಕ್ಷ-ರಾಜ್ಯ ಎರಡಕ್ಕೂ ಒಳ್ಳೆಯದಲ್ಲ ಎಂದರು.

ಐಟಿ ದಾಳಿ ಸಂಬಂಧಿಸಿದಂತೆ ಕಾಂಗ್ರೆಸ್ ನವರ ಬೇನಾಮಿ ಹಣ ಅಂತ ನಮಗೆ ಬಂದಿರುವ ವರದಿ. ಇವರೇ, ನಂಬರ್ 1, ನಂಬರ್ 2  ಅಂತ ಬೇನಾಮಿಗಳ ಮೂಲಕ ಸಂಗ್ರಹಿಸಿರುವ ಹಣ ಎಂದು ನಮಗೆ ಬಂದಿರುವ ಮಾಹಿತಿ. ನಮ್ಮ ಆರೋಪ ನಿರಾಕರಿಸುವ ಅಧಿಕಾರ ಅವರಿಗಿದೆ ಎಂದು ತಿಳಿಸಿದರು.

ನಿರಾಕರಿಸುವ ಬರದಲ್ಲಿ ಕುಮಾರಸ್ವಾಮಿ ಅವರಿಗೆ ನಕಲಿ ಸ್ವಾಮಿ ಅಂತ ಹೇಳೋದು. ಆಶ್ವಥ್  ನಾರಯಣ್ ಅವರಿಗೆ ನವರಂಗಿ ನಾರಾಯಣ ಅನ್ನುವುದು. ನನಗೆ ಸಿ .ಟಿ. ತೆಗೆದು ಲೂಟಿ ಅನ್ನೋದು ಹಂಗಾದ್ರೆ ನಿಮ್ಮ ಡಿಕೆ ತೆಗೆದು ಕೇಡಿ ಅನ್ನಬಹುದಲ್ವಾ ಎಂದರು.

ಕೇಡಿ ಮನಸ್ಥಿತಿಯಲ್ಲಿ ವಿವರಿಸುವುದನ್ನು ಬಿಡಬೇಕು. ಉಪ ಮುಖ್ಯಮಂತ್ರಿ ತಮಗಿರುವ ಜವಬ್ದಾರಿಯ ಅರಿವಿಟ್ಟು ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಹೆದರಿಸುವ, ಬೆದರಿಸುವ, ರಾಜಕಾರಣ ಮಾಡುತ್ತಾರೆ. ಇಲ್ಲಿ ಹೆದರೋಕೆ-ಬೆದರೋಕೆ ಯಾರಿದ್ದಾರೆ ಎಂದು ಹೇಳಿದರು.

Advertisement

ಅವರು ರಾಕ್ಷಸ ವಂಶಕ್ಕೆ ಸೇರಿದವರಾ? ಕೇಡಿ ವಂಶಕ್ಕೆ ಸೇರಿದವರ, ಇಷ್ಟಕ್ಕೂ ನನ್ನ ಅಸ್ತಿ ಸಾವಿರಾರು ಕೋಟಿ ಎನಿಲ್ಲಾ… ಲೂಟಿ ಯಾರು ಮಾಡಿದ್ದಾರೆ ಅನ್ನೋದನು ರಾಜ್ಯದ ಜನರಿಗೆ ಗೊತ್ತಿದೆ‌ ಎಂದು ಹೇಳಿದರು.

ಆಸ್ತಿಯಲ್ಲಿ ಅಜಗಜಾಂತರ ವ್ಯತ್ಯಾಸ ಆಗಿರುವುದು ಯಾರದ್ದು ಡಿ.ಕೆ.ಶಿವಕುಮಾರ್ ಅವರೇ ಎಂದು ಪ್ರಶ್ನಿಸಿರುವ ಅವರು, ನೀವು ಏನು ಮಾತನಾಡ್ತೀರೋ ಅದು ನಿಮಗೆ ಅನ್ವಯವಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next