Advertisement

ಪೌರಕಾರ್ಮಿಕರ ಪಾದಪೂಜೆ ನಡೆಸಿ ಶಾಸಕ ರವಿ ದೀಪಾವಳಿ ಆಚರಣೆ  

07:54 PM Oct 27, 2022 | Team Udayavani |

ಚಿಕ್ಕಮಗಳೂರು: ನಗರಸಭೆ ಮತ್ತು ಪೌರಕಾರ್ಮಿಕರ ಸಂಘದ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ. ರವಿ ಪೌರ ಕಾರ್ಮಿಕರ ಪಾದಪೂಜೆ ನೆರವೇರಿಸಿ ಸನ್ಮಾನಿಸಿ ವಿಶಿಷ್ಟವಾಗಿ ದೀಪಾವಳಿ ಹಬ್ಬ ಆಚರಿಸಿದರು.

Advertisement

ಅನಂತರ ಮಾತನಾಡಿದ ಅವರು, ಬೆಳಕು ಪ್ರಜ್ವಲಿಸಿದಾಗ ಅಂಧಕಾರಕ್ಕೆ ಜಾಗವಿಲ್ಲ. ಜಾತೀಯತೆ, ಅಸ್ಪೃಶ್ಯತೆ, ಅಂಧಕಾರ ದೂರವಾಗಿ ಪಾರಿವಾರಿಕ ಸಂಬಂಧಗಳ ಮೂಲಕ ಒಂದು ಎಂಬ ಭಾವನೆ ಬೆಳಸಬೇಕು. ನೀತಿವಂತ ಸಮಾಜ ನಿರ್ಮಾಣವಾಗಬೇಕು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದು, ಚಿಕ್ಕಮಗಳೂರು ನಗರಸಭೆ ಪೌರಕಾರ್ಮಿಕರೊಂದಿಗೆ ದೀಪಾವಳಿ ಆಚರಣೆ ಮಾಡುತ್ತಿದೆ. ನಗರದ ಜನರ ಆರೋಗ್ಯ ಸುರಕ್ಷತೆಗೆ ಪ್ರತಿನಿತ್ಯ ಹೋರಾಟ ಮಾಡುವ ಪೌರಕಾರ್ಮಿಕರ ಬಂಧುಗಳೊಂದಿಗೆ ದೀಪಾವಳಿ ಆಚರಣೆ ಮಾಡಲಾಗುತ್ತಿದೆ. ಇದು ಅವಿಸ್ಮರಣೀಯ ಸಂದರ್ಭ ಎಂದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next