Advertisement

ಮಂಡ್ಯದಲ್ಲಿ ಮೈತ್ರಿ ಬೇಕು ಎಂದು ಯಾರೂ ಗೋಗರೆಯುತ್ತಿಲ್ಲ:ಪುಟ್ಟರಾಜು 

12:30 PM Oct 09, 2018 | Team Udayavani |

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಯಾರ ಬಳಿಯೂ ನಮಗೆ ಅಂಗಲಾಚಬೇಕಾದ ಸ್ಥಿತಿ ಇಲ್ಲ . ಮೈತ್ರಿಗಾಗಿ ಯಾರೂ ಗೋಗೆರೆಯುತ್ತಿಲ್ಲ ಎಂದು ಸಚಿವ ಸಿ.ಎಸ್‌.ಪುಟ್ಟರಾಜು ಅವರು ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಚಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪುಟ್ಟರಾಜು ಚಲುವರಾಯ ಸ್ವಾಮಿ ಅವರ ವಿರುದ್ಧ ಕಿಡಿ ಕಾರಿದರು. ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಈ ಬಗ್ಗೆ ವರಿಷ್ಠರಾದ ದೇವೇಗೌಡರು ಮತ್ತು ಕುಮಾರಣ್ಣ ತೀರ್ಮಾನ ಮಾಡುತ್ತಾರೆ ಎಂದರು.

ಇದೇ ವೇಳೆ ಚಲುವರಾಯಸ್ವಾಮಿ ಅವರಿಗೆ ಟಾಂಗ್‌ ನೀಡಿ ಈಗ ಡೆಡ್‌ ಹಾರ್ಸ್‌ಗಳೆಲ್ಲಾ ಮಾತನಾಡುವ ಹಾಗೆ ಆಗಿದೆ. ನಾಗಮಂಗಲದ ಇತಿಹಾಸದಲ್ಲಿ 52 ಸಾವಿರ ಮತಗಳ ಅಂತರದಿಂದ ಸೋತದ್ದು ಎಂದಾದರೂ ನೋಡಿದ್ದೀರಾ . ಅವರು ಬಾಯಿ ಮುಚ್ಚಿಕೊಂಡು ಇರಲಿ ಎಂದರು. 

ಜನ ಕೊಟ್ಟ ತೀರ್ಪಿನಿಂದ ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮೈತ್ರಿ ಮಾಡಿಕೊಳ್ಳಲಾಗಿದೆ. ಎರಡೂ ಪಕ್ಷದ ನಾಯಕರ ತೀರ್ಮಾನಕ್ಕೂ ಬದ್ಧರಾಗಿರಬೇಕಾಗುತ್ತದೆ. ಚಲುವರಾಯ ಸ್ವಾಮಿ ಅವರೂ ನಡೆಯಬೇಕಾಗುತ್ತದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next