Advertisement

ಸಿಆರ್‌ಝಡ್‌ ಮರಳು: ಗುರುತಿಸಿದ್ದ ಎಲ್ಲ 202 ಮಂದಿಗೂ ಅನುಮತಿ

12:03 AM Dec 15, 2022 | Team Udayavani |

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಸಿಆರ್‌ಝಡ್‌ ಪ್ರದೇಶದ ನದಿಗಳಿಂದ ಮರಳು ದಿಬ್ಬ ತೆರವುಗೊಳಿಸಲು ಮತ್ತೆ 54 ಮಂದಿಗೆ ತಾತ್ಕಾಲಿಕ ಪರವಾನಿಗೆ ವಿತರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದರೊಂದಿಗೆ ಒಟ್ಟು ಮರಳು ತೆಗೆಯುವವರ ಸಂಖ್ಯೆ 202ಕ್ಕೆ ಏರಿದೆ.

Advertisement

ಈ ಕುರಿತು ಮರಳು ಕುರಿತ 7 ಸದಸ್ಯರ ಸಮಿತಿಯ ಅಧ್ಯಕ್ಷರಾಗಿರುವ ದ.ಕ. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಆದೇಶ ಹೊರಡಿಸಿದ್ದಾರೆ. ಈ ಮೊದಲು ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಗುರುತಿಸಲಾದ 14 ಮರಳು ದಿಬ್ಬಗಳನ್ನು ತೆರವುಗೊಳಿ ಸಲು ಮಾರ್ಚ್‌ 5ರಂದು ಎನ್‌ಒಸಿ ನೀಡಲಾಗಿದ್ದು ಅದರ ಅವಧಿ 2023ರ ಮಾರ್ಚ್‌ 4ರ ವರೆಗೆ ಇದೆ. ಮರಳು ದಿಬ್ಬಗಳನ್ನು ಮಾನವ ಶ್ರಮದಿಂದ ತೆರವುಗೊಳಿಸಲು 11.01. 2022ರಲ್ಲಿ ಸರಕಾರ ನೀಡಿರುವ ಮಾರ್ಗಸೂಚಿಗನುಸಾರ ತಾತ್ಕಾಲಿಕ ಪರವಾನಿಗೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿತ್ತು. ಸ್ವೀಕೃತ 282 ಅರ್ಜಿ ಬಂದಿದ್ದು, 148 ಮಂದಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿತ್ತು.

ನ್ಯಾಯಾಂಗ ಹೋರಾಟ: ಬಳಿಕ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಚೆನ್ನೈ ಹಸುರು ಪೀಠ ನೀಡಿದ ಆದೇಶದಂತೆ ದ.ಕ. ಜಿಲ್ಲಾಡಳಿತ ಹಾಗೂ ಮರಳು ಸಮಿತಿ ಕೂಡ ಎಲ್ಲ 14 ದಿಬ್ಬಗಳಲ್ಲಿ ಮರಳು ತೆರವು ಹಾಗೂ ಸಾಗಾಟ ಮಾಡುವುದನ್ನು ಮೇ 21ರಂದು ಸ್ಥಗಿತಗೊಳಿಸಿ ಆದೇಶಿಸಿತ್ತು. ಇದರ ವಿರುದ್ಧ ತಾತ್ಕಾಲಿಕ ಪರವಾನಿಗೆದಾರರು ರಾಜ್ಯ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದು, ಮಾ. 21ರಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಪರವಾನಿಗೆ ಸ್ಥಗಿತ ಆದೇಶವನ್ನು ನ್ಯಾಯಾಲಯವು ರದ್ದುಪಡಿಸಿತು.

ಹಸುರು ಪೀಠದ ಆದೇಶ ಉಡುಪಿ
ಜಿಲ್ಲೆಗೆ ಸಂಬಂಧಿಸಿದ್ದು, ಪ್ರಸ್ತುತ ಹೈಕೋರ್ಟ್‌ ಆದೇಶ ಪಾಲನೆ ಮಾಡದಿ ದ್ದರೆ ನ್ಯಾಯಾಲಯ ನಿಂದನೆಯಾಗುವ ಸಂಭವವಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೋಟಿಸ್‌ ಗಳನ್ನು ಕೋರ್ಟ್‌ ವಜಾಗೊಳಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಮೀನುಗಾರಿಕೆ ದೋಣಿಗಳ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಮರಳು ದಿಬ್ಬ ಗಳನ್ನು ತೆರವುಗೊಳಿಸಲು ಅನುಮತಿ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next