Advertisement

ಪಾಕ್‌ ಮಕ್ಕಳ ಭವಿಷ್ಯ ಬಲಿ! ಐಶಾರಾಮಿ ಆಮದು ತೆರಿಗೆ ಹೆಚ್ಚಳ

11:16 PM Feb 24, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗು ವಂತಾಗಿದ್ದು, ತುತ್ತು ಅನ್ನಕ್ಕಾಗಿ ಮಕ್ಕಳು ಕೂಡ ಪೋಷಕರೊಂದಿಗೆ ಕೂಲಿ ಮಾಡುವ ಪರಿಸ್ಥಿತಿ ಎದುರಾಗಿದೆ.

Advertisement

ಮೊಹಮ್ಮದ್‌ ಅಮೀನ್‌ ಎನ್ನುವ ಪಾಕ್‌ ನಿವಾಸಿ, ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿ ಕೊಂಡಿದ್ದು, ಆರ್ಥಿಕ ಸಂಕಷ್ಟ ದಿಂದಾಗಿ 5ನೇ ತರಗತಿ ಓದುತ್ತಿರುವ ತನ್ನ ಮಗಳು ನಾದಿಯಾಳನ್ನು ಶಾಲೆ ಬಿಡಿಸಿ, ಆಕೆಯ ತಾಯಿಯೊಂದಿಗೆ ಮನೆಗೆಲಸಕ್ಕೆ ಕಳು ಹಿಸುತ್ತಿರುವುದಾಗಿ ಹೇಳಿಕೊಂಡಿ ದ್ದಾರೆ. ಪರಿಸ್ಥಿತಿ ಮುಂದು ವರಿದರೆ 13 ವರ್ಷದ ತಮ್ಮ ಇನ್ನೊಬ್ಬ ಮಗಳನ್ನೂ ಶಾಲೆ ಬಿಡಿಸ ಬೇಕಾದ ಪರಿಸ್ಥಿತಿ ಬರಬಹುದು ಎಂದು ಕಣ್ಣೀರಿಟ್ಟಿದ್ದಾರೆ. ಪಾಕಿಸ್ತಾನದ ಹಲವು ಪೋಷಕರ ಸ್ಥಿತಿಯೂ ಇದುವೇ ಆಗಿದೆ.

ಗಡಿ ನಿರ್ಬಂಧ ರಫ್ತು ಸಂಕಷ್ಟ: ಅಫ್ಘಾನಿಸ್ತಾನದ ಜತೆಗಿನ ಪಾಕಿಸ್ತಾನದ ಸಮರದಿಂದಾಗಿ ಪಾಕ್‌ ಸರ್ಕಾರಿ ಟೋರ್ಕಾಮ್‌ ಗಡಿಯನ್ನು ನಿರ್ಬಂಧಿಸಿದೆ. ಇದರಿಂದ ಆಫ‌^ನ್‌ ಹಾಗೂ ಮಧ್ಯ ಏಷ್ಯಾ ದೇಶಗಳಿಗೆ ತೆರಳಬೇಕಿದ್ದ ಕೋಟ್ಯಂತರ ಮೌಲ್ಯದ ರಫ್ತು ಸ್ಥಗಿತ ಗೊಂಡಿದ್ದು, ಉದ್ಯಮಿಗಳು ಮತ್ತು ರಫ್ತು ದಾರರು ಸಂಕಷ್ಟ ಎದುರಿಸುವಂತಾಗಿದೆ.

ಐಶಾರಾಮಿ ಆಮದು ತೆರಿಗೆ ಹೆಚ್ಚಳ
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಿಂದ ಸಾಲ ಪಡೆಯಲು ವಿಧಿಸಿರುವ ಷರತ್ತಿನಂತೆ ತೆರಿಗೆ ಸಂಗ್ರಹ ಹೆಚ್ಚಿಸಲು ಮುಂದಾಗಿರುವ ಪಾಕ್‌, ಐಶಾರಾಮಿ ವಸ್ತುಗಳು ಹಾಗೂ ಸೇವಾ ಸರಕುಗಳ ಆಮದಿನ ಮೇಲಿನ ತೆರಿಗೆ ಶುಲ್ಕವನ್ನು ಶೇ.17 ರಿಂದ ಶೇ.25ಕ್ಕೆ ಏರಿಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next