Advertisement

ಜೂ. 30ರಿಂದ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ತೀವ್ರ ತಪಾಸಣೆ

08:43 PM May 11, 2022 | Team Udayavani |

ಜಮ್ಮು: ಜೂ. 30ರಿಂದ ಅಮರನಾಥ ಯಾತ್ರೆ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಸೇನಾ ಪಡೆಯು, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿರುವ ಭಾರತ-ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ರೇಖೆಯ (ಐಬಿ) ಹತ್ತಿರದ ಪ್ರಾಂತ್ಯಗಳಲ್ಲಿ ತೀವ್ರ ತಪಾಸಣೆ ಆರಂಭಿಸಿದೆ.

Advertisement

ಒಳನುಸುಳುಕೋರರನ್ನು ಪತ್ತೆ ಹಚ್ಚುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೇನೆಯ ಈ ಕೆಲಸಕ್ಕೆ ಸ್ಥಳೀಯ ಪೊಲೀಸರು, ಬಿಎಸ್‌ಎಫ್ ಹಾಗೂ ಸಿಆರ್‌ಪಿಎಫ್ ಯೋಧರೂ ಕೈ ಜೋಡಿಸಿದ್ದಾರೆ.

ಐಬಿ ಬಳಿಯ ಗ್ಲಾದ್‌ ಎಂಬ ಹಳ್ಳಿ ಹಾಗೂ ಅದರ ಸುತ್ತಲಿನ ಪ್ರದೇಶ, ಜಮ್ಮು ಪಠಾಣ್‌ಕೋಟ್‌ ರಾಷ್ಟ್ರೀಯ ಹೆದ್ದಾರಿ ಹಾಗೂ ಸುತ್ತಲಿನ ಪ್ರಾಂತ್ಯಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next