Advertisement

ಐಟಿ ದಾಳಿಗೆ ಸಿಆರ್‌ಪಿಎಫ್‌ ಸಿಬಂದಿ ದುರ್ಬಳಕೆ: ಪೂಜಾರಿ

08:00 AM Aug 03, 2017 | Team Udayavani |

ಮಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರ ಮನೆ ಸೇರಿದಂತೆ 39 ಕಡೆ ಆದಾಯ ತೆರಿಗೆ ಇಲಾಖೆಯ ದಾಳಿ ಮಾಡುವ ನೆಪದಲ್ಲಿ ಸಿಆರ್‌ಪಿಎಫ್ ಸಿಬಂದಿಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಳಿ ಗಾಗಿ ಮಿಲಿಟರಿಯ ಒಂದು ಭಾಗ ವಾಗಿ ರುವ ಸಿಆರ್‌ಪಿಎಫ್ನ್ನು ಬಳಸಿ ಕೊಂಡಿ ರುವುದು ಆ ಸಿಬಂದಿಗೆ ಮಾಡಿದ ಅವಮಾನವಾಗಿದೆ. ಸಿಆರ್‌ಪಿಎಫ್‌ ಸಿಬಂದಿ ಯನ್ನು ಬಳಸಿಕೊಂಡು ದಾಳಿ ಮಾಡಲು ಸಚಿವರೇನು ಉಗ್ರ ಗಾಮಿಯೇ ಎಂದು ಜನಾರ್ದನ ಪೂಜಾರಿ ಪ್ರಶ್ನಿಸಿದರು.

ಐಟಿ ಇಲಾಖೆ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸೇರಿದ್ದಲ್ಲ. ನಾನು ಕೇಂದ್ರದ ಸಚಿವನಾಗಿದ್ದ ವೇಳೆ ಕಸ್ಟಮ್ಸ್‌, ಆದಾಯ ತೆರಿಗೆ ಇಲಾಖೆಗಳು ನನ್ನ ಸುಪರ್ದಿಯಲ್ಲಿದ್ದವು. ಆದರೆ ಯಾವುದೇ ಇಲಾಖೆಗಳನ್ನು ಈ ರೀತಿ ದುರುಪ  ಯೋಗ ಪಡಿಸಿಕೊಂಡಿಲ್ಲ ಎಂದು ಅವರು ಹೇಳಿದರು.

ದುರುದ್ದೇಶದ ದಾಳಿ
ಈ ದಾಳಿ ದುರುದ್ದೇಶದಿಂದಲೇ ಕೂಡಿದೆ ಎಂದ ಅವರು, ಇಂದು ಡಿಕೆಶಿ ಯವರ ಮನೆ ಮೇಲೆ, ನಾಳೆ ಪೂಜಾರಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮೇಲೆಯೂ ದಾಳಿ ಮಾಡಿಸು ತ್ತಾರೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಯಾರೂ ಪ್ರಶ್ನಿಸು ವಂತೆಯೇ ಇಲ್ಲವೇ ಎಂದರು.

ಗುಜರಾತ್‌ನಲ್ಲಿ ಸ್ಪರ್ಧಿಸುತ್ತಿರುವ ಕರ್ನಾಟಕದ ಕಾಂಗ್ರೆಸ್‌ ಅಭ್ಯರ್ಥಿ ಅಹ್ಮದ್‌ ಪಟೇಲ್‌ ಅವರನ್ನು ಸೋಲಿ ಸುವ ಹುನ್ನಾರವಾಗಿ ಇಂತಹ ದಾಳಿ ಗಳನ್ನು ನಡೆಸಲಾಗುತ್ತಿದೆ. ಆದರೆ ಕಾಂಗ್ರೆಸ್‌ನ್ನು ಸೋಲಿಸುವುದು ಪ್ರಧಾನಿ ಯವರಿಂದ ಸಾಧ್ಯವಿಲ್ಲ ಎಂದು ಪೂಜಾರಿ ತಿಳಿಸಿದರು. 

Advertisement

ಹೋರಾಟಕ್ಕೆ ಬೆಂಬಲ
ಕಾವ್ಯಾ ನಿಗೂಢ ಸಾವಿನ ಕುರಿತಂತೆ ಆಕೆಯ ತಾಯಿಯೇ ಎಲ್ಲ ಉತ್ತರ ನೀಡಿದ್ದಾರೆ. ನಾನು ಮಾತನಾಡಿದರೆ ಜಾತಿ ರಾಜಕಾರಣ ಆರೋಪ ಬರ ಬಹುದು. ಆದರೂ ನ್ಯಾಯಕ್ಕಾಗಿ ನಡೆ ಯುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸುದ್ದಿ ಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಕಾವ್ಯಾ ಸಾವಿನ ಕುರಿತಂತೆ ತನ್ನ ಶಿಷ್ಯ ಉಗ್ರಪ್ಪನವರು ತಮ್ಮ ಮಾತು ಗಳ ಮೂಲಕ ತನ್ನ ತಾಕತ್ತನ್ನು ತೋರಿ ಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಲ್ಲ ರೀತಿಯ ತನಿಖೆಗೆ ಮುಂದಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next