Advertisement

ಸಿಆರ್‌ಪಿಎಫ್ ಯೋಧನ ಮಾನವೀಯತೆ; ವಿಡಿಯೋ ವೈರಲ್‌

09:55 AM May 15, 2019 | Vishnu Das |

ಶ್ರೀನಗರ: ಯೋಧರೆಂದರೆ ಎಲ್ಲರಿಗೂ ಅಪಾರ ಗೌರವ, ಕಾರಣ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ದರಿರುವವರು ಎಂದು. ಇಲ್ಲೊಬ್ಬರು ಸಿಆರ್‌ಪಿಎಫ್ ಯೋಧ ಕರ್ತವ್ಯದ ವೇಳೆ ಮಾನವೀಯತೆ ತೋರಿ ಸುದ್ದಿಯಾಗಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

ಸಿಆರ್‌ಪಿಎಫ್ ಹವಾಲ್ದಾರ್‌ ಇಕ್ಬಾಲ್‌ ಸಿಂಗ್‌ ಅವರು ಕರ್ತವ್ಯದಲ್ಲಿರುವ ವೇಳೆ ತನ್ನ ಬುತ್ತಿಯಿಂದ ಪಾರ್ಶ್ವವಾಯು ಪೀಡಿತ ಬಾಲಕನೊಬ್ಬನಿಗೆ ಕೈತುತ್ತು ತಿನ್ನಿಸಿದ್ದಾರೆ.

ಇಕ್ಬಾಲ್‌ ಸಿಂಗ್‌ ಅವರ ಮಾನವೀಯ ಕಾರ್ಯಕ್ಕೆ ಡಿಜಿ ಮೆಚ್ಚುಗೆ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ಇಕ್ಬಾಲ್‌ ಸಿಂಗ್‌ ಅವರು ಪೆಬ್ರವರಿ 14 ರಂದು ಪುಲ್ವಾಮಾ ಭೀಕರ ಉಗ್ರ ದಾಳಿ ನಡೆದ ವೇಳೆ ವಾಹನವೊಂದನ್ನು ಚಲಾಯಿಸುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next