Advertisement

ವಿಕ್ರಮಾದಿತ್ಯ ವೀಕ್ಷಣೆಗೆ ಜನಸಾಗರ

01:55 PM Dec 23, 2019 | Suhan S |

ಕಾರವಾರ :  ಐಎನ್‌ಎಸ್‌ ಕದಂಬ ಸೀಬರ್ಡ್‌ ನೌಕಾನೆಲೆಯಲ್ಲಿ ಯುದ್ಧ ನೌಕೆ ವೀಕ್ಷಣೆಗೆ ರವಿವಾರ ಜನಜಾತ್ರೆ ಕಂಡುಬಂತು. ಏಷ್ಯಾ ಖಂಡದಲ್ಲೇ ಅತೀ ದೊಡ್ಡದಾದ ಸೀಬರ್ಡ್‌ ನೌಕಾನೆಲೆಯಲ್ಲಿ ನೇವಿ ಸಪ್ತಾಹದ ಅಂಗವಾಗಿ ಯುದ್ಧನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

Advertisement

ನೌಕೆ ವೀಕ್ಷಣೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನಸಾಗರ ಹರಿದು ಬಂದಿತ್ತು. ಬೆಳಗಿನಿಂದಲೇ ನೇವಿಯ ಅರಗಾ ಮುಖ್ಯದ್ವಾರದ ಬಳಿ ಜನ ಜಮಾಯಿಸಿದ್ದರು. ರಾಷ್ಟ್ರೀಯ ಹೆದ್ದಾರಿ -66ರಲ್ಲಿ 3 ಕಿ.ಮೀ. ಉದ್ದಕ್ಕೆ ಜನರು ಬೆಳಗಿನ 9 ಗಂಟೆಯಿಂದಲೇ ಯುದ್ಧನೌಕೆ ವಿಕ್ರಮಾದಿತ್ಯ ವೀಕ್ಷಣೆಗೆ ಕಾದಿದ್ದರು. ನೌಕೆ

ನೋಡಲು ಕಾದಿದ್ದ ಜನರ ನಿಭಾಯಿಸುವುದೇ ನೇವಿ ಸಿಬ್ಬಂದಿಗೆ ದೊಡ್ಡ ಸವಾಲಾಯಿತು. ವಿಪರೀತ ವಾಹನ ದಟ್ಟಣೆಯಿಂದ ರಾಷ್ಟ್ರೀಯ ಹೆದ್ದಾರಿ ಹಲವು ಭಾರಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಜನರು ನೌಕೆಯೆ ಮೇಲೆ ಸಂಭ್ರಮಿಸಿದರು: ಕಾರವಾರ, ಶಿರಸಿ, ಕುಮಟಾ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಿಂದ ಬಂದಿದ್ದ ಜನರು, ಯುವಕರು, ಯುವತಿಯರು, ವೃದ್ಧರು, ಶಾಲಾ ಕಾಲೇಜು ಮಕ್ಕಳು ನೌಕೆಯನ್ನು ವೀಕ್ಷಿಸಿ ಸಂಭ್ರಮಿಸಿದರು, ಸಂತಸಪಟ್ಟರು. ಹೆಮ್ಮೆ ಪಟ್ಟರು. ರನ್‌ವೇ ತುದಿಗೆ ಇದ್ದ ಭಾರತ ಧ್ವಜದ ಬಳಿ ನಿಂತು ಸೆಲ್ಫಿ  ಕ್ಲಿಕ್ಕಿಸಿಕೊಂಡರು. ಅಲ್ಲದೇ ತಮ್ಮ ಬಂಧುಗಳು, ಗೆಳೆಯರಿಂದ ಭಾವಚಿತ್ರಗಳನ್ನು ಸೆರೆ ಹಿಡಿದುಕೊಂಡರು. ಸೀಬರ್ಡ್‌ ನೌಕಾನೆಲೆ ವ್ಯಾಪ್ತಿಯ ಸಮುದ್ರ, ಶಿಫ್‌ ಲಿಫ್ಟ್‌ ವ್ಯವಸ್ಥೆ, ಯುದ್ಧ

ನೌಕೆಗಳು ಧಕ್ಕೆಗೆ ಬರುವ ಒಳ ಮಾರ್ಗ ಹಾಗೂ ಅಲೆ ತಡೆಗೋಡೆಗಳನ್ನು ಯುದ್ಧ ನೌಕೆಗಳ ತಾಣವಾಗಿ ರೂಪಿಸಲು ಮಾಡಿದ ತಂತ್ರಜ್ಞಾನವನ್ನು ಕಂಡರು. ಭಾರತೀಯ ನೌಕಾಪಡೆಯ ಶಕ್ತಿ ಸಾಮರ್ಥ್ಯಗಳನ್ನು ನೇವಿ ಸೇಲರ್ಗಳಿಂದ ಕೇಳಿ ತಿಳಿದುಕೊಂಡರು.

Advertisement

ಲಘು ರಿಫ್ರೆಶ್ಮೆಂಟ್‌: ಉರಿ ಬಿಸಿಲಲ್ಲಿ ತಾಸುಗಟ್ಟಲೆ ಕ್ಯೂ (ಸರದಿ ಸಾಲಿನಲ್ಲಿ) ನಿಂತು ಬಸವಳಿದು ಯುದ್ಧ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ಭೇಟಿಗೆ ಬಂದ ಜನರಿಗೆ ಕದಂಬ ನೌಕಾನೆಲೆ ಆಡಳಿತ ವರ್ಗ ಲಘು ಉಪಾಹಾರದ ವ್ಯವಸ್ಥೆ ಮಾಡಿತ್ತು. ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿತ್ತು.

ಏನಿದೆ ಐಎನ್‌ಎಸ್‌ : ವಿಕ್ರಮಾದಿತ್ಯದಲ್ಲಿ ಐಎನ್‌ಎಸ್‌ ವಿಕ್ರಮಾದಿತ್ಯ ಅತೀ ಉದ್ದನೆಯ ಮತ್ತು ಅತೀ ಎತ್ತರದ ಭಾರತದ ಯುದ್ಧ ನೌಕೆ. 63 ಸಾವಿರ ಕೋಟಿ ರೂ. ಮೌಲ್ಯದ ಈ ಯುದ್ಧ ನೌಕೆ ಒಮ್ಮಲೇ ಎರಡು ಮೂರು ಲಘು ಯುದ್ಧ ವಿಮಾನಗಳು, ನಾಲ್ಕು ಹೆಲಿಕಾಪ್ಟರ್‌ ಹಾಗೂ ನಾಲ್ಕಾರು ಮಿಗ್‌ಗಳು ಲ್ಯಾಂಡಿಂಗ್‌ ಆಗುವಷ್ಟು ವಿಶಾಲವಾಗಿದೆ. ಯುದ್ಧ ವಿಮಾನಗಳು ಟೇಕ್‌ ಆಫ್‌ ಆಗುವಷ್ಟು ರನ್‌ ವೇ ಹೊಂದಿದೆ. ಅಷ್ಟೊಂದು ಆಧುನಿಕ ಸೌಕರ್ಯಗಳು ಈ ನೌಕೆಯಲ್ಲಿವೆ. ರಷ್ಯಾ ನಿರ್ಮಿತ ಈ ಯುದ್ಧ ನೌಕೆಯನ್ನು ಎನ್‌ ಡಿಎ ಮೊದಲ ಅವಧಿಯಲ್ಲಿ ದೇಶಕ್ಕೆ ಸಮರ್ಪಣೆ ಮಾಡಲಾಗಿತ್ತು. ಐಎನ್‌ ಎಸ್‌ ವಿಕ್ರಮಾದಿತ್ಯ ಯುದ್ಧ ನೌಕೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಗಸ್ತು ತಿರುಗುತ್ತಿರುತ್ತದೆ. ಈ ಬೃಹತ್‌ ನೌಕೆಯ ಸುತ್ತ ಆರು ಲಘು ಯುದ್ಧ ನೌಕೆಗಳು ಗಸ್ತು (ಕಾವಲು) ಇರುತ್ತವೆ. ಈಚೆಗೆ ಫ್ರಾನ್ಸ್‌ ಮತ್ತು ಭಾರತದ ಜಂಟಿ ಸಮರಾಭ್ಯಾಸದ ವೇಳೆ ಐಎನ್‌ಎಸ್‌ ವಿಕ್ರಮಾದಿತ್ಯ ಪ್ರಮುಖ ಪಾತ್ರ ವಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next