Advertisement

ತೋಟಗಾರಿಕೆ ಬೆಳೆಗಳಿಗೆ ವಿಮೆ ಯೋಜನೆ

02:44 PM Jun 28, 2020 | Suhan S |

ಬೆಳಗಾವಿ: ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ದ್ರಾಕ್ಷಿ, ದಾಳಿಂಬೆ ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳಿಗೆ ವಿಮೆ ಪಾವತಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Advertisement

ಅಥಣಿ ತಾಲೂಕಿಗೆ ದ್ರಾಕ್ಷಿ ಹಾಗೂ ದಾಳಿಂಬೆ, ಗೋಕಾಕ ತಾಲೂಕಿಗೆ ದ್ರಾಕ್ಷಿ ಹಾಗೂ ಹಸಿಮೆಣಸಿನಕಾಯಿ, ರಾಯಬಾಗ ತಾಲೂಕಿಗೆ ದ್ರಾಕ್ಷಿ ಮತ್ತು ಬೆ„ಲಹೊಂಗಲ, ಚಿಕ್ಕೋಡಿ, ಹುಕ್ಕೇರಿ ಹಾಗೂ ಸವದತ್ತಿ ತಾಲೂಕುಗಳಿಗೆ ಹಸಿಮೆಣಸಿನಕಾಯಿ ಬೆಳೆಗಳಿಗೆ ಜೂನ್‌ 30 ಬೆಳೆ ವಿಮಾ ಪಾವತಿಸಲು ಕೊನೆಯ ದಿನಾಂಕವಾಗಿದೆ. ಪ್ರತಿ ಹೆಕ್ಟೇರ್‌ ದ್ರಾಕ್ಷಿ ಬೆಳೆಗೆ 14,000 ರೂ, ದಾಳಿಂಬೆ ಬೆಳೆಗೆ 6,350 ರೂ ಹಾಗೂ ಹಸಿಮೆಣಸಿನಕಾಯಿ ಬೆಳೆಗೆ 3,550 ರೂ ರೈತರ ವಂತಿಕೆಯ ವಿಮಾ ಕಂತು ನಿಗದಿ ಮಾಡಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಅರಿಷಿಣ, ಆಲೂಗಡ್ಡೆ ( ಮಳೆಯಾಶ್ರಿತ ), ಟೊಮೆಟೋ, ಈರುಳ್ಳಿ ( ನೀರಾವರಿ/ಮಳೆಯಾಶ್ರಿತ ) ಹಾಗೂ ಎಲೆಕೋಸು ಬೆಳೆಗಳಿಗೆ ವಿಮೆ ಪಾವತಿಸಬಹುದಾಗಿದ್ದು , ಎಲೆಕೋಸು ಬೆಳೆಗೆ ಜು. 15 ಹಾಗೂ ಉಳಿದ ಬೆಳೆಗಳಿಗೆ ಜು.31 ಕೊನೆಯ ದಿನಾಂಕವಾಗಿದೆ. ಪ್ರತಿ ಹೆಕ್ಟೇರ್‌ ಅರಿಷಿಣ ಬೆಳೆಗೆ 6,650 ರೂ, ಆಲೂಗಡ್ಡೆ ( ಮಳೆಯಾಶ್ರಿತ ) ಬೆಳೆಗೆ 3,500 ರೂ, ಟೊಮ್ಯಾಟೊ ಬೆಳೆಗೆ 5,900 ರೂ, ಈರುಳ್ಳಿ ( ನೀರಾವರಿ ) ಬೆಳೆಗೆ 3,750 ರೂ, ಈರುಳ್ಳಿ ( ಮಳೆಯಾಶ್ರಿತ ) ಬೆಳೆಗೆ 3,500 ರೂ ಹಾಗೂ ಎಲೆಕೋಸು ಬೆಳೆಗೆ 3,150 ರೂದಂತೆ ವಿಮಾ ಕಂತಿನ ಮೊತ್ತ ನಿಗದಿಯಾಗಿದೆ.

ಈ ಯೋಜನೆಗಳಿಗೆ ಗ್ರಾಮ ಪಂಚಾಯತಿ ಅಥವಾ ಹೋಬಳಿವಾರು ಬೆಳೆಗಳ ವ್ಯಾಪ್ತಿಯ ಕುರಿತು ಸಂಬಂಧಪಟ್ಟ ತಾಲೂಕು ಮತ್ತು ಹೋಬಳಿಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿರದ ಬ್ಯಾಂಕ್‌ ಶಾಖೆಗಳಲ್ಲಿ ವಿಮೆ ಕಂತು ಪಾವತಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ದೂರವಾಣಿ ಸಂಖ್ಯೆ 0831-2431559, ಗೋಕಾಕ ದೂ. ಸಂಖ್ಯೆ 08332-229382, ಖಾನಾಪೂರ ದೂ. ಸಂಖ್ಯೆ 08336-223387, ಸವದತ್ತಿ ದೂ. ಸಂಖ್ಯೆ 08330-222082, ಅಥಣಿ ದೂ. ಸಂಖ್ಯೆ 08289-285099, ರಾಮದುರ್ಗ ದೂ.ಸಂಖ್ಯೆ 08335-241512 , ರಾಯಬಾಗ ದೂ. ಸಂಖ್ಯೆ 08331-225049, ಹುಕ್ಕೇರಿ ದೂ. ಸಂಖ್ಯೆ 08333-265915, ಚಿಕ್ಕೋಡಿ ದೂ. ಸಂಖ್ಯೆ 08338-274943 ಹಾಗೂ ಬೈಲಹೊಂಗಲ 08288-233758ಗೆ ಸಂಪರ್ಕಿಸಲು ತೋಟಗಾರಿಕೆ ಇಲಾಖೆ ಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next