Advertisement

ಬೆಳೆ ಸಮೀಕ್ಷೆಗೆ ಸಿಗದ ಬೆಂಬಲ:ಪರದಾಟ

03:16 PM Sep 16, 2020 | Suhan S |

ನೆಲಮಂಗಲ: ರೈತರು ಸರ್ಕಾರದ ಸೌಲಭ್ಯ ಗಳಿಂಂ‌ದ ವಂಚಿñ ‌ರಾಗಲು ಕಾರಣವಾಗುತ್ತಿರುವ ‌ ಪಹಣಿಯಲ್ಲಿನ ಬೆಳೆ ನೋಂದಣಿ ಸರಿಪ‌ಡಿಸಲು ನಡೆಸಲಾಗುತ್ತಿರುವ ಬೆಳೆ ಸಮೀಕ್ಷೆಗೆ ರೈತರು ಸ್ಪಂದನೆ ನೀಡುತ್ತಿಲ್ಲದಿರುವುದು ಕಂಡು ಬಂದಿದೆ.

Advertisement

ಸಮೀಕ್ಷೆ ಅನಿವಾರ್ಯ: ಜಿಲ್ಲೆಯ 486620 ಫ್ಲ್ಯಾಟ್‌ಗಳಲ್ಲಿ 88500 ಫ್ಲ್ಯಾಟ್‌ಗಳ ಬೆಳೆ ಸಮೀಕ್ಷೆಯಾಗಿದ್ದು  ನೆಲಮಂಗಲದಲ್ಲಿ 107693 ಫ್ಲ್ಯಾಟ್‌ಗ ‌ಳಲ್ಲಿ ರೈತರು ತಮ್ಮ ಮೊಬೈಲ್‌ಗ ‌ಳಲ್ಲಿ 24500 ಫ್ಲ್ಯಾಟ್‌ಗಳನ್ನು ಮಾತ್ರ ಬೆಳೆ ಸಮೀಕ್ಷೆ ನಡೆಸಿದ್ದಾರೆ. ಈ ಮೂಲಕ ‌ ಇನ್ನೂ ಶೇ.78 ಬೆಳೆ ಸಮೀಕ್ಷೆ ನಡೆಸುವ ಅನಿವಾರ್ಯತೆ ಇದೆ. ಸಮೀಕ್ಷೆ ನಡೆಸುವ ರೈತರ ಹೊಲಗಳಿಗೆ ರೈತರು ಬರುತ್ತಿಲ್ಲವಾದ್ದ ರಿಂದ ವಿಳಂಬವಾಗುತ್ತಿರುವುದುಕಂಡುಬಂದಿದೆ. ರೈತರ ಜತೆ ಪಿಆರ್‌ಗ ‌ಳನ್ನು ನೇಮಕ ಮಾಡಲಾಗಿದ್ದರೂ ರೈತರಿಂದ ಸ್ಪಂದನೆ ಸಿಗುತಿಲ್ಲ.

ಸೆ.23 ಕೊನೇ ದಿನ: ಜಮೀನಿನಲ್ಲಿ ಬೆಳೆದಿರುವ ¸ ಬೆಳೆ ಸಮೀಕ್ಷೆ ನಡೆಸ‌ಲು ಸೆ.23ರಂದು ಕೊನೇ ದಿನವಾಗಿದ್ದು ಜಿಲ್ಲೆಯ ಎಲ್ಲಾ ರೈತರು ಹಾಗೂ ತಾಲೂಕಿನ ರೈತರು ಮುಂದಿನ ಸಮಸ್ಯೆ ಎದುರಾಗ ‌ದಿರಲು ಕಡ್ಡಾಯವಾಗಿ ಬೆಳೆ ಸಮೀಕ್ಷೆ ನಡೆಸಲು ತಹಶೀಲ್ದಾರ್‌, ಕೃಷಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇಲಾಖೆ ಸಹಾಯ ಪಡೆದುಕೊಳ್ಳಿ: ರೈತರೇ ಜಮೀನುಗಳಲ್ಲಿ ಬೆಳೆ ಸಮೀಕ್ಷೆ ಮಾಡಲು ಅನುವು ಮಾಡಿಕೊಂಡಲಾಗಿದೆ. ಆದರೆ ಸರಿಯಾಗಿ ರೈತರು ಸ್ಪಂದನೆ ನೀಡದ ಕಾರಣ ಖಾಸಗಿ ವ್ಯಕ್ತಿಗಳನ್ನು (ಪಿಆರ್‌) ನೇಮಕ ಮಾಡಿದ್ದು ಬೆಳೆ ಸಮೀಕ್ಷೆ ಬಗ್ಗೆ ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು, ತೋಟಗಾರಿಕೆ, ಕೃಷಿ ಹಾಗೂ ರೇಷೆ ¾ ಇಲಾಖೆ ಅಧಿಕಾರಿಗಳು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ನಿಮ್ಮ ಗ್ರಾಮಕ್ಕೆ ಪಿಆರ್‌ಗಳ ನೇಮಕ ‌ ಮಾಡಲಾಗಿದ್ದು ಅವರ ಸಹಾಯ ಪಡೆದುಕೊಳ್ಳಬಹುದಾಗಿದೆ.

ಅಧಿಕಾರಿಗಳ ಪರದಾಟ: ಬೆಳೆ ಸಮೀಕ್ಷೆ ವೇಳೆ ರೈತರು ಕಡ್ಡಾಯವಾಗಿ ಸ್ಥಳದಲ್ಲಿ ಇದ್ದು ಫೋಟೋ ತೆಗೆಯುವಂತೆ ತಿಳಿಸಿರುವುದ ರಿಂದ ರೈತರು ಅಥವಾ ಕುಟುಂಬದ ಸಿಬ್ಬಂದಿ ಜಮೀನುಗಳ ಬಳಿ ಬರಲು ಹಿಂದೇಟು ಹಾಕುತ್ತಿದ್ದಾರೆ. ರೈತರನ್ನು ಕರೆ ತಂದು ಬೆಳೆ ಸಮೀಕ್ಷೆ ನಡೆಸಲು ಅಧಿಕಾರಿಗಳು ಪರ ದಾಡುತ್ತಿದ್ದಾರೆ.

Advertisement

ಬೆಂಗಳೂರು ನಗರಕ್ಕೆಹೊಂದಿಕೊಂಡಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಬಹಳಷ್ಟು ಜನ ಭೂ ಮಾಲೀಕರಾಗಿದ್ದಾರೆ.ಖಾಲಿ ಪ್ರದೇಶವಿದ್ದರೆಯಾವುದೇ ಬೆಳೆ ಬೆಳೆದಿಲ್ಲ ಎಂದು ನಮೂದಿಸ ಬೇಕು. ಸರ್ಕಾರದ ಗಮನಕ್ಕೆ ಬೆಳೆ ವಿವರ ತರದಿದ್ದಲ್ಲಿಕಾನೂನುಕ್ರಮ ಕೈಗೊಳ್ಳಲಾಗುವುದು. ರೈತರು ರಾಗಿ ಬೆಂಬಲ ಬೆಲೆ ಹಾಗೂ ವಿವಿಧ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಅನಿವಾರ್ಯ. ಪಿ.ರವೀಂದ್ರ, ಜಿಲ್ಲಾಧಿಕಾರಿ

ಪಿಆರ್‌ಗಳ ಸಹಾಯ ಪಡೆದು ಬೆಳೆ ಸಮೀಕ್ಷೆಗೆ ರೈತರು ಕೈಜೋಡಿಸಬೇಕು, ಬೆಳೆ ಸಮೀಕ್ಷೆ ಮಾಡುವುದರಿಂದ ರೈತರು ಸರ್ಕಾರದಿಂದ ಪಡೆಯುವ ವಿವಿಧ ಸೌಲಭ್ಯಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಡಾ.ರಾಘವೇಂದ್ರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next