Advertisement

ಹೊಲಕ್ಕೆ ಬಂದ ಭಾರೀ ಗಾತ್ರದ ಮೊಸಳೆಯ ರಕ್ಷಣೆ; ಮತ್ತೆ ನದಿಗೆ

11:51 AM Jun 19, 2019 | Team Udayavani |

ವಡೋದರ : ಗುಜರಾತ್‌ನ ವಡೋದರ ಜಿಲ್ಲೆಯಲ್ಲಿ ಹೊಲವೊಂದಕ್ಕೆ ಮಧ್ಯರಾತ್ರಿಯ ವೇಳೆಗೆ ನಾಲ್ಕೂವರೆ ಅಡಿ ಉದ್ದದ ಭಾರೀ ಮೊಸಳೆಯೊಂದು ಬಂದು ಅತಂಕ ಸೃಷ್ಟಿಸಿತು.

Advertisement

ಇಟೋಲ ಗ್ರಾಮದ  ಕೃಷಿಕ ಸಂಜಯ್‌ ಪಟೇಲ್‌ ಅವರ ನಾಯಿ ಹೊಲದಲ್ಲಿ ಬೊಬ್ಬಿಡುತ್ತಿದ್ದುದು ಕೇಳಿ ಬಂದಾಗ ಅವರು ಒಡನೆಯೇ ಹೊಲದ ಕಡೆಗೆ ಧಾವಿಸಿದರು. ಅಲ್ಲಿ ಬಾಯಿ ತೆರೆದ ಭಾರೀ ಗಾತ್ರದ ಮೊಸಳೆ ಇರುವುದನ್ನು ಕಂಡು ದಿಗಿಲಾದರು.

ಒಡನೆಯೇ ಪಟೇಲ್‌ ವನ್ಯಮೃಗ ಸಂರಕ್ಷಣ ದಳಕ್ಕೆ ಫೋನ್‌ ಮಾಡಿದರು. ಧಾವಿಸಿ ಬಂದ ತಂಡ ಅರ್ಧ ತಾಸೊಳಗೆ ಮೊಸಳೆಯನ್ನು ಹಿಡಿದು ಅರಣ್ಯ ರಕ್ಷಕರಿಗೆ ಒಪ್ಪಿಸಿದರು.

ಅರಣ್ಯ ರಕ್ಷಕರು ಮೊಸಳೆಯನ್ನು ಬಳಿಕ ವಿಶ್ವಾಮಿತ್ರಿ ನದಿಗೆ ಬಿಟ್ಟರು. ಪಟೇಲ್‌ ಅವರ ಹೊಲಕ್ಕೆ ಸಮೀಪವೇ ಹರಿಯುತ್ತಿರುವ ಧಧರ್‌ ನದಿಯಲ್ಲಿ ಹಲವಾರು ಮೊಸಳೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next