Advertisement

ರಾಯಚೂರು: ಜಾತ್ರೆಯಂದೇ ಕೆರೆಯಲ್ಲಿ ಪ್ರತ್ಯಕ್ಷವಾದ ಮೊಸಳೆ: ಬೆಚ್ಚಿಬಿದ್ದ ಭಕ್ತರು

09:42 AM Dec 13, 2019 | Mithun PG |

ರಾಯಚೂರು:  ಇಲ್ಲಿಗೆ ಸಮೀಪದ ಮನ್ಸಲಾಪುರ ಕೆರೆಯಲ್ಲಿ ಗುರುವಾರ ಬೆಳಗ್ಗೆ  ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Advertisement

ಇಂದು ಗ್ರಾಮದ ಆರಾಧ್ಯದೈವ ಶ್ರೀ ಸಿದ್ಧಲಿಂಗೇಶ್ವರ ಸ್ಚಾಮಿ ಜಾತ್ರಾ ಮಹೋತ್ಸವವಿದ್ದು, ಗ್ರಾಮಕ್ಕೆ ದೂರದೂರುಗಳಿಂದ ಭಕ್ತರು ಪುಂಖಾನುಪುಂಖವಾಗಿ ಬರುತ್ತಿದ್ದಾರೆ. ಆದರೆ ಕೆರೆಯಲ್ಲಿ ಕಂಡುಬಂದ ಮೊಸಳೆ ಕಂಡು ಭಕ್ತರು ಭಯಭೀತರಾಗಿದ್ದಾರೆ.

ಇದರಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಆಡಳಿತವು ಮೊಸಳೆ ಇದೆ ಎಚ್ಚರಿಕೆ ಎಂದು ಸೂಚನೆ ಫಲಕ ಅಳವಡಿಸಿದೆ. ಅಲ್ಲದೇ ಕೆರೆ ಹತ್ತಿರ ಸುಳಿಯದಂತೆ ಜನರಿಗೆ ಸೂಚಿಸಲಾಗಿದೆ. ಜಾನುವಾರುಗಳನ್ನು ಕೆರೆ ಹತ್ತಿರ ಕರೆದೊಯ್ಯದಂತೆ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next