Advertisement

ರಾಯಚೂರು: ಭತ್ತದ ಗದ್ದೆಗೆ ನುಗ್ಗಿ ಜನರ ಆತಂಕಕ್ಕೆ ಕಾರಣವಾದ ಮೊಸಳೆ

02:39 PM Feb 06, 2021 | Team Udayavani |

ರಾಯಚೂರು: ಭತ್ತದ ಗದ್ದೆಗೆ ನುಗ್ಗಿದ ಮೊಸಳೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ ಘಟನೆ ತಾಲೂಕಿನ ಯಾಪಲದಿನ್ನಿ ಗ್ರಾಮ ಸಮೀಪ ಶನಿವಾರ ನಡೆದಿದೆ.

Advertisement

ಕೃಷ್ಣ ನದಿಪಾತ್ರದಲ್ಲಿರುವ ಈ ಗ್ರಾಮದ ಸಮೀಪದ ಜಂಗ್ಲಪ್ಪ ಎನ್ನುವ ರೈತನ ಭತ್ತದ ಜಮೀನಿಗೆ ಮೊಸಳೆ ನುಗ್ಗಿದೆ. ಈ ಬಗ್ಗೆ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟಿನ ಕಾರ್ಯದರ್ಶಿ ನರಸಿಂಹಲು, ವಲಯದ ಅರಣ್ಯ ಅಧಿಕಾರಿ ರಾಜೇಶ್ ನಾಯಕ್ ರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ:ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳಿದ ವೀರ ಯೋಧರಿಗೆ ಉಜಿರೆಯಲ್ಲಿ ಭವ್ಯ ಸ್ವಾಗತ

ಅರಣ್ಯ ರಕ್ಷಕ ಯಲ್ಲಪ್ಪ ಮರ್ಚೆಡ್ ಸ್ಥಳಕ್ಕೆ ಭೇಟಿ ನೀಡಿ ಡಿ.ರಾಂಪುರ ಗ್ರಾಮದ ಮೀನುಗಾರರ ನೆರವಿನೊಂದಿಗೆ ಬಲೆ ಹಾಕಿ ಮೊಸಳೆ ಹಿಡಿದಿದ್ದಾರೆ. ಅಂದಾಜು 3 – 4 ವರ್ಷದ ಮೊಸಳೆಯಾಗಿದ್ದು, ಸುಮಾರು 1.5 ಮೀಟರ್ ನಷ್ಟು ಉದ್ದವಿದೆ. ಆಗಾಗ ಗ್ರಾಮದ ಹಳ್ಳದಲ್ಲಿ, ರೈತರ ಜಮೀನುಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟು ಮಾಡುತ್ತಿತ್ತು. ಬಳಿಕ ಮೊಸಳೆಯನ್ನು ಜನ ಸಂಚಾರವಿಲ್ಲದ ಕೃಷ್ಣಾನದಿಯ ಜುರಾಲಾ ಡ್ಯಾಮ್ ನ ಹಿನ್ನೀರಿನಲ್ಲಿ ಬಿಡಲಾಯಿತು.

ಮೊಸಳೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಬ್ದುಲ್ ಭಾಷಾ, ಯಾಪಲದಿನ್ನಿ ಠಾಣೆಯ ನಾಗರಾಜ್, ಮೀನುಗಾರ ಭಗವಂತ, ಗ್ರಾಮದ ಅಂಬರೀಶ ಜಂಗಲಪ್ಪ ರವಿಕುಮಾರ್ ಮೌಲಪ್ಪ ಇತರರು ಭಾಗವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next