Advertisement

ಮೊಸಳೆ ಮರಿ ಮಾರಾಟ: ಇಬ್ಬರ ಬಂಧನ

11:01 AM Dec 10, 2021 | Team Udayavani |

ಬೆಂಗಳೂರು: ನೀರಿನ ಕ್ಯಾನ್‌ ಒಳಗೆ ಜೀವಂತ ಮೊಸಳೆ ಮರಿ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಜಯನಗರದ ಅಬ್ದುಲ್‌ ಖಾಲಿದ್‌ (32), ರಾಮನಗರದ ಬೂದಿಗುಪ್ಪೆಯ ಬಿ.ಎಸ್‌. ಗಂಗಾಧರ್‌ (32) ಬಂಧಿತರು. ಆರೋಪಿ ಗಳಿಂದ ಜೀವಂತ ಮೊಸಳೆ ವಶಪಡಿಸಿಕೊಳ್ಳ ಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ;- 5 ಕೋಟಿ ರೂ. ವೆಚ್ಚದಲ್ಲಿ ವಾಡಿ ಅಭಿವೃದ್ದಿ

ಆರೋಪಿಗಳು ಖಾಲಿ ನೀರಿನ ಕ್ಯಾನಿನಲ್ಲಿ ಜೀವಂತ ಮೊಸಳೆ ಮರಿ ಇರಿಸಿಕೊಂಡು, ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನ ಈಶ್ವರಿ ಟಾಕೀಸ್‌ ಸಮೀಪದಲ್ಲಿ ಮೊಸಳೆ ಮರಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next