Advertisement

ಎನ್‌ಕೌಂಟರ್‌ನಲ್ಲಿ ಕ್ರಿಮಿನಲ್‌ ಹತ್ಯೆ, ಇಬ್ಬರು ಪೊಲೀಸರಿಗೆ ಗಾಯ

03:36 PM Aug 16, 2017 | Team Udayavani |

ಮುಜಫ‌ರನಗರ : ಹನ್ನೆರಡಕ್ಕೂ ಹೆಚ್ಚು ಕ್ರಿಮಿನಲ್‌ ಕೇಸ್‌ಗಳಲ್ಲಿ  ಪೊಲೀಸರಿಗೆ ಬೇಕಾಗಿದ್ದ ಹಾಗೂ ತನ್ನ ತಲೆಗೆ 50,000 ರೂ. ಇನಾಮು ಹೊಂದಿದ್ದ ಕುಖ್ಯಾತ ಪಾತಕಿ ನಿತಿನ್‌ ಎಂಬಾತನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ; ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. 

Advertisement

ಮುಜಫ‌ರನಗರ ಜಿಲ್ಲೆಯ ನಗ್ಲಾ ಕಬೀರ್‌ ಎಂಬ ಗ್ರಾಮದಲ್ಲಿ ಇಂದು ನಸುಕಿನ ವೇಳೆ ಈ ಪೊಲೀಸ್‌ ಎನ್‌ಕೌಂಟರ್‌ ನಡೆಯಿತು.

ಪಾತಕಿ ನಿತಿನ್‌ ಜತೆಗಿದ್ದ ಆತನ ಸಹಚರರು ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಗುಂಡೇಟು ಪಡೆದರಾದರೂ ಪರಾರಿಯಾಗುವಲ್ಲಿ ಸಫ‌ಲರಾದರು. ಅವರಿಗಾಗಿ ಈಗ ಶೋಧ ಕಾರ್ಯಾಚರಣೆ ನಡೆದಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ ಮತ್ತು ಹಾಪುರ್‌ ಜಿಲ್ಲೆಯಲ್ಲಿ ನಡೆದಿದ್ದ  ಡಜನ್‌ ಗಟ್ಟಲೆ ಕೊಲೆ ಮತ್ತು ದರೋಡೆ ಕೃತ್ಯಗಳಿಗೆ ಸಂಬಂಧಪಟ್ಟು ನಿತಿನ್‌ ಪೊಲೀಸರಿಗೆ ಮೋಸ್ಟ್‌ ವಾಂಟೆಡ್‌ ಆಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next