Advertisement

ಮಲ್ಪೆ: ಕತ್ತಿಯಿಂದ ಕಡಿದು ಪರಾರಿ

11:01 AM Dec 06, 2018 | Team Udayavani |

ಮಲ್ಪೆ: ವ್ಯವಹಾರಕ್ಕೆ ಸಂಬಂಧಿಸಿ ಹಣದ ವಿಚಾರದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರಿಗೆ ಕತ್ತಿಯಿಂದ ಕಡಿದಿರುವ ಘಟನೆ ಮಂಗಳವಾರ ರಾತ್ರಿ ಮಲ್ಪೆಯ ಕೊಳ ಎಂಬಲ್ಲಿ ಬಳಿ ನಡೆದಿದೆ.

Advertisement

ಕೊಳದಲ್ಲಿ ಮೀನು ವ್ಯಾಪಾರದ ಆಫೀಸಿನಲ್ಲಿ ಕುಳಿತಿದ್ದ ಕಟಪಾಡಿ ಏಣಗುಡ್ಡೆಯ ನಿವಾಸಿ ಸುಧಾಕರ ಸುವರ್ಣ ಅವರಿಗೆ ಕೊಳ ನಿವಾಸಿ ಧನು ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಕುತ್ತಿಗೆ, ಬಲಗೈ ಮತ್ತು ಎದೆಭಾಗಕ್ಕೆ ಗಾಯವಾಗಿರುವ ಸುಧಾಕರ ಸುವರ್ಣ ಅವರನ್ನು ಸ್ಥಳೀಯರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಸುಧಾಕರ ಸುವರ್ಣ ಮತ್ತು ಧನು ಮೀನು ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಕೆಲವು ಸಮಯದ ಹಿಂದೆ ಹಣದ ವ್ಯವಹಾರದಲ್ಲಿ ಇಬ್ಬರಿಗೂ ಜಗಳವಾಗಿ  ಪ್ರತ್ಯೇಕವಾಗಿದ್ದರು. ಆ ಬಳಿಕ ಸುಧಾಕರ ಸುವರ್ಣ ಆವರು ಬೇರೆಯವರ ಜತೆಯಲ್ಲಿ  ವ್ಯವಹಾರ ನಡೆಸುತ್ತಿದ್ದರು. ಈ ಮಧ್ಯೆ ಹಣದ ವಿಚಾರಕ್ಕೆ ಸಂಬಂಧಿಸಿ ಧನು ಹಲ್ಲೆ ನಡೆಸಿದ್ದಾನೆ. ಸುಧಾಕರ್‌ ಸುವರ್ಣ  ಚೇತರಿಸಿಕೊಂಡಿದ್ದಾರೆ. 

ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಠಾಣಾಧಿಕಾರಿ ಮಧು ಬಿ.ಇ. ನೇತೃತ್ವದಲ್ಲಿ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ  ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next